ಸಿದ್ದರಾಮಯ್ಯ ಗುಣಮುಖರಾಗಲು ಪ್ರಾರ್ಥನೆ

ಸಿದ್ದರಾಮಯ್ಯ ಗುಣಮುಖರಾಗಲು ಪ್ರಾರ್ಥನೆ

ಗಂಗಾವತಿ : ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗುಣಮುಖರಾಗಲೆಂದು ಶ್ರಿ ಚನ್ನಬಸವ ತಾತನ ಮತ್ತು ಗ್ರಾಮದೇವತೆ ಶ್ರೀ ದುರ್ಗಾದೇವಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯದ 75 ಸಾವಿರ ಕೋವಿಡ್ ಸೋಂಕಿತರು ಸಹ ಬೇಗ ಗುಣಮುಖರಾಗಲಿ. ಕೊರೋನ ವೈರಸ್ ಮಹಾಮಾರಿ ರೋಗ ನಮ್ಮ ರಾಜ್ಯದಿಂದ ಮುಕ್ತಿ ಹೊಂದಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಮರೇಶ್ ಗೋನಾಳ್, ನಗರಸಭೆ ಸದಸ್ಯರಾದ ಮನೋಹರ ಸ್ವಾಮಿ ಹಿರೇಮಠ, ಮೌಲಾಸಾಬ್ ಆನಂದ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುರೇಶ್ ಗೌರಪ್ಪ, ಕೆ.ವಿಶ್ವನಾಥ್, ಗುರು, ನಾಗರಾಜ್ ಬರಗೂರು, ಕೆ.ಅಂಬಣ್ಣ ಇತರರು ಉಪಸ್ಥಿತರಿದ್ದರು.

Related