ತಂದೆ ಹೆಸರಿನಲ್ಲಿ 500 ಬಡವರಿಗೆ ದಿನಸಿ ಕಿಟ್

ತಂದೆ ಹೆಸರಿನಲ್ಲಿ 500 ಬಡವರಿಗೆ ದಿನಸಿ ಕಿಟ್

ಬೆಂಗಳೂರು: ನಗರದ ಸುದ್ದುಗುಂಟೆ ಪಾಳ್ಯದ ವಾರ್ಡ್‍ನ ಚಿಕ್ಕ ಆಡುಗೋಡಿಯಲ್ಲಿ ಲಕ್ಷ್ಮೀ ವೆಂಕಟೇಶ್ವರ ದೇವಾಸ್ಥಾನದ ಧರ್ಮಕಾರ್ಯಕರ್ತ ಆರ್. ಗೋಪಾಲ್ ದಿನಸಿ ಕಿಟ್ ವಿತರಿಸಿದರು.

ಸುದ್ದುಗುಂಟೆ ಪಾಳ್ಯ ವಾರ್ಡ್‍ನ ಚಿಕ್ಕ ಆಡುಗೋಡಿಯಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯ ಪಿ ಮಂಜುನಾಥ್ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಧರ್ಮಕಾರ್ಯಕರ್ತರಾದ ಆರ್. ಗೋಪಾಲ್ 500 ಬಡ ಜನರಿಗೆ ದಿನಸಿ ಕಿಟ್ ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ರಾಮಲಿಂಗಾ ರೆಡ್ಡಿ ಅವರು, ಲಾಕ್‍ಡೌನ್ ಆರಂಭವಾದಗಿನಿಂದಲೂ ಇದುವರೆಗೆ 7 ಸಾವಿರ ಜನರಿಗೆ ದಿನಸಿ ಕಿಟ್ ನೀಡಿದ್ದೇವೆ. ಪ್ರತಿನಿತ್ಯ 53 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಚಿಕ್ಕ ಆಡುಗೋಡಿಯಲ್ಲಿ ಅವಶ್ಯಕತೆ ಇರುವ ಕುಟುಂಬಗಳಿಗೆ ಮಾತ್ರ ದಿನಸಿ ಹಂಚಲಾಯಿತು ಎಂದು ತಿಳಿಸಿದರು.  ಆರ್ ಗೋಪಾಲ್ ಅವರು ಮಾತನಾಡಿ, ನಮ್ಮ ತಂದೆಯ ನೆನಪಿಗಾಗಿ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದೇವೆ ಎಂದು ಹೇಳಿದರು.

Related