ಕೊರೋನಾ ಓಡಿಸಲು ಶ್ರೀಗಳ ಕರೆ

ಕೊರೋನಾ ಓಡಿಸಲು ಶ್ರೀಗಳ ಕರೆ

ಇಂಡಿ: ಜನರ ನೆಮ್ಮದಿ ಕೆಡಿಸಿರುವ ಕೊರೊನಾ ಮಹಾಮಾರಿವನ್ನು ಹೊಡೆದೋಡಿಸೋಣ ಎಂದು ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಮಹಾ ಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಬಸವಶ್ರೀ ಗೆಳೆಯರ ಬಳಗದ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ಡೆಡ್ಲಿ ಮಹಾ ಮಾರಿ ಕೋರೋನಾ ರೋಗವನ್ನು ತೊಲಗಿಸಬೇಕಾದರೆ ನಾವೆಲ್ಲರು ಜಾಗೃತರಾಗುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜರ್ ಬಳಸುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು.

ಈ ಕೋವಿಡ್-19 ವಿರುದ್ದ ಹೋರಾಟದಲ್ಲಿ ಕರ್ತವ್ಯದ ಕರೆಗಾಗಿ, ವೈಯಕ್ತಿಕ ಜೀವನ ಜೊತೆ ಜೀವದ ಹಂಗು ತೊರೆದು ಸಾರ್ವಜನಿಕ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾದ್ಯಮ ಮಿತ್ರರು ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶ್ರೀಶೈಲ ಮುಳಜಿ, ಪ್ರಶಾಂತಗೌಡ ಬಿರಾದಾರ, ಶ್ರೀಶೈಲ ಕೋರಳ್ಳಿ, ಶಿವು ಮಲಕಗೊಂಡ, ಅಡಿವೆಪ್ಪಗೌಡ ಪಾಟೀಲ, ನಿಂಗನಗೌಡ ಬಿರಾದಾರ ಇದ್ದರು.

Related