ಕಮಿಷನ್ ಹಣ ಬಿಡುಗಡೆ ಒತ್ತಾಯ

ಕಮಿಷನ್ ಹಣ ಬಿಡುಗಡೆ ಒತ್ತಾಯ

ಪಾವಗಡ:ತಾಲ್ಲೂಕು ಪಡಿತರ ವಿತರಕರ ಕ್ಷೇಮಾಭಿವೃಯವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಆವರಣದಲ್ಲಿ ಗ್ರೇಡ್ ೨ ತಹಶೀಲ್ದಾರ್ ಸತ್ಯ ನಾರಾಯಣ ಅವರಿಗೆಕಮಿಷನ್  ಹಣ ಬಿಡುಗಡೆ ಮಾಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯ ಕಮೀಷನ್ ಬರಬೇಕೆಂದು ಜೂನ್ ತಿಂಗಳಿನಲ್ಲಿ ಕಮಿಷನ್ ಕೇವಲ ಅರ್ಧ ಭಾಗದಷ್ಟು ಬಂದಿರುತ್ತದೆ ಇತರೆ ಜಿಲ್ಲೆಗಳಲ್ಲಿ ಜೂನ್, ಜುಲೈ, ಆಗಸ್ಟ್ ಮಾಹೆ ಕಮೀಷನ್ ಬಂದಿರುತ್ತದೆ ನಮ್ಮ ಸಂಘಕ್ಕೆ ಮಾಹಿತಿ ಬಂದಿರುತ್ತದೆ ಆದ್ದರಿಂದ ದಯವಿಟ್ಟು ನಮ್ಮಕಮಿಷನ್ ತ್ವರಿತವಾಗಿ ಸರ್ಕಾರ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದೇ ತಾಲೂಕಿನ ಕೋಡಿಗೆ ಹಳ್ಳಿ ವಿ.ಎಸ್.ಎಸ್.ಎನ್ ಮತ್ತು ವಿಎಸ್‌ಎಸ್‌ಎನ್ ಹುಸೇನ್ ಪುರ ಕಾರ್ಯದರ್ಶಿಗಳು ಕೋವಿಡ್-೧೯ ನಿಂದ ಮೃತಪಟ್ಟಿರುತ್ತಾರೆ ಸರ್ಕಾರ ವತಿಯಿಂದ ಈ ಕಾರ್ಯದರ್ಶಿಗಳಿಗೆ ಸಹಾಯ ಧನ ಸರ್ಕಾರ ಕೊಡಬೇಕೆಂದು ಹೇಳಿದರು ತಾಲೂಕಿನ ತಾಲ್ಲೂಕು ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

Related