ಇಂದು ಸಿಎಂ ಜನತಾ ದರ್ಶನ

ಇಂದು ಸಿಎಂ ಜನತಾ ದರ್ಶನ

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಕಷ್ಟಗಳನ್ನು ಆಲಿಸಲೆಂದು ಜನತಾದರ್ಶನವನ್ನು ಏರ್ಪಾಟು ಮಾಡಲಾಗಿತ್ತು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ (ಸೋಮವಾರ ನ.27) ಹಮ್ಮಿಕೊಂಡ ಜನತಾ ದರ್ಶನ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಜನಸ್ಪಂದನಕ್ಕೆ ಆಗಮಿಸಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಓರ್ವ ವ್ಯಕ್ತಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದರು.

ಈ ಜನತಾ ದರ್ಶನಕ್ಕೆ ಓರ್ವ ಕಾಂಗ್ರೆಸ್​ ಕಾರ್ಯಕರ್ತ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯ ಬಳಿ ನಿಗಮ ಮಂಡಳಿ ಹುದ್ದೆ ನೀಡಬೇಕು ಎಂದು ಅಹವಾಲು ಇಟ್ಟರು. “ನಿಗಮ ಮಂಡಳಿಗೆ ನನ್ನ ಹೆಸರು ನಾಮ ನಿರ್ದೇಶನ ಮಾಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಶಿಫಾರಸು ಮಾಡಿದ್ದಾರೆ. ನಾನು ಹಿಂದುಳಿದ ವರ್ಗಕ್ಕೆ ಸೇರಿದವನು. ಸಿಎಂ ಅವರು ಹಿಂದುಳಿದ ವರ್ಗದವರನ್ನ ಗುರುತಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡುತ್ತೇವೆ. ಜನತಾ ದರ್ಶನದಲ್ಲಿ ಸಿಎಂ ಸಿಗುತ್ತಾರೆ ಎಂದು ಬಂದಿದ್ದೇನೆ. ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಇದ್ದೇನೆ. ಒಬಿಸಿ ಘಟಕದ ಕಾರ್ಯದರ್ಶಿಯಾಗಿದ್ದೇನೆ” ಎಂದು ಕಾರ್ಯಕರ್ತ ರವೀಂದ್ರ ಒತ್ತಾಯಿಸಿದರು.

ಜನತಾ ದರ್ಶನ ಹಿನ್ನೆಲೆಯಲ್ಲಿ ಜನರ ಅಹವಾಲು ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದರು. ಮಧ್ಯಾಹ್ನ 1 ಗಂಟೆವರೆಗೆ ಸಿಎಂ ಸಿದ್ದರಾಮಯ್ಯ ಅವರು 1,147 ಅರ್ಜಿಗಳನ್ನು ಸ್ವೀಕರಿಸಿದರು.

Related