ಸಿಇಟಿ ; ರಾಜ್ಯಕ್ಕೆ 2ನೇ ಸ್ಥಾನ ಪಡೆದ ವಿದ್ಯಾರ್ಥಿ

ಸಿಇಟಿ ; ರಾಜ್ಯಕ್ಕೆ 2ನೇ ಸ್ಥಾನ ಪಡೆದ ವಿದ್ಯಾರ್ಥಿ

ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರದ ವೈದ್ಯರ ಪುತ್ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.

ಮಹಾಲಿಂಗಪುರದ ವೈದ್ಯ ಡಾ|.ಎಸ್. ಚನ್ನಾಳ ಅವರ ಪುತ್ರ ಆರ್ಯನ್ ಚನ್ನಾಳ, ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದು, ಡಿ ಫಾರ್ಮಾ ಮತ್ತು ಬಿ ಫಾರ್ಮಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾನೆ. ಅಲ್ಲದೇ ಬಿಎನ್‌ವೈಎಸ್ (ಬ್ಯಾಚುಲರ್ ಆಫ್ ನ್ಯಾಚುಲಿಟಿ ಎಕ್ಷ ಯೋಗಾ ಸೈನ್ಸ) ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾನೆ.

Related