ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪ್ರತಿ ಮನೆಗೆ ತಲುಪಿಸುವಂತೆ ಕರೆ

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪ್ರತಿ ಮನೆಗೆ ತಲುಪಿಸುವಂತೆ ಕರೆ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೌಮ್ಯ ರೆಡ್ಡಿ ಅವರು ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, ಚುನಾವಣಾ ಪ್ರಚಾರ ಕಾರ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಿ, ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪ್ರತಿ ಮನೆಗೆ ತಲುಪಿಸುವಂತೆ ಕರೆ ನೀಡಿದೆ.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಹೆಚ್ ಎಂ ರೇವಣ್ಣ, ಶ್ರೀ ಉಮಾಪತಿ ಶ್ರೀನಿವಾಸ್ ಗೌಡ, ಶ್ರೀ ಬಿ ಎನ್ ಮಂಜುನಾಥ್ ರೆಡ್ಡಿ, ಶ್ರೀ ರಾಮೋಜಿ ಗೌಡ, ಶ್ರೀ ರಘುನಾಥ್ ನಾಯ್ಡು, ಶ್ರೀ ನಾಗಭೂಷಣ ರೆಡ್ಡಿ, ಶ್ರೀ ಅಶ್ವಥ್ ನಾರಾಯಣ ಸ್ವಾಮಿ, ಶ್ರೀ ವಾಸುದೇವ ರೆಡ್ಡಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಶ್ರೀ ವಾಸುದೇವ್ ರೆಡ್ಡಿ, ಶ್ರೀ ರವೀಂದ್ರ, ಶ್ರೀ ಸಯ್ಯದ್ ಸರ್ದಾರ್, ಬಾಲಕೃಷ್ಣ ರೆಡ್ಡಿ, ಶ್ರೀಮತಿ ಶೋಭಾ ಜಗದೀಶ್ ಗೌಡ, ಶ್ರೀ ಶ್ರೀನಿವಾಸ್ ಮೂರ್ತಿ, ಶ್ರೀಮತಿ ಜಯಶ್ರೀ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related