“ಜೆಡಿಎಸ್ ಪಕ್ಷಕ್ಕೆ ಬೈ ಬೈ ಕಾಂಗ್ರೆಸ್ ಪಕ್ಷಕ್ಕೆ ಜೈ”

“ಜೆಡಿಎಸ್ ಪಕ್ಷಕ್ಕೆ ಬೈ ಬೈ ಕಾಂಗ್ರೆಸ್ ಪಕ್ಷಕ್ಕೆ ಜೈ”

ಚಿಂಚೋಳಿ: ಜೆಡಿಎಸ್ ಪಕ್ಷದ ನಾಯಕರ ಧೃಡ ನಿಲುವಿನ ಕೊರತೆ ಹಾಗೂ ಆಂತರಿಕ ವಿಷಯಕ್ಕೆ ಬೇಸತ್ತು, ಜೆಡಿಎಸ್ ಹಿರಿಯ, ಯುವ ಮುಖಂಡರು,  ಚಿಂಚೋಳಿ ಕಾಂಗ್ರೆಸ್ ಮುಖಂಡರ ನಾಯಕತ್ವದ ಗುಣ ಮೆಚ್ಚಿ, ಸೋಮವಾರ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರುಗಳಾದ ಈಶ್ವರ ಖಂಡ್ರೆ, ಸಲಿಂ ಅಹಮದ್, ಎಸ್. ಆರ್. ಪಾಟೀಲ್, ಶಾಸಕರು ಪ್ರಿಯಾಂಕ್ ಖರ್ಗೆ, ಮಾಜಿ ಸಚಿವರು ಶರಣಪ್ರಕಾಶ್ ಪಾಟೀಲ್, ಜಿಲ್ಲಾ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಹಿರಿಯ ಮತ್ತು ಯುವ ಮುಖಂಡರುಗಳು ಶ್ರೀಮತಿ ಲಕ್ಷ್ಮೀದೇವಿ ಮಂಜುನಾಥ್ ಕೊರವಿ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷರು, ಮಜೀದ್ ಪಟೇಲ್, ಜೆಡಿಎಸ್,ಎಸ್‌ಸಿ.ಎಸ್.ಟಿ ಘಟಕ ತಾಲೂಕು ಅಧ್ಯಕ್ಷರು, ವಾಮಾನರಾವ್ ಕೊರವಿ, ಜೆಡಿಎಸ್ ತಾಲೂಕು ಉಪಾಧ್ಯಕ್ಷರು ಮಕದುಮ್ ಖಾನ್, ಡಾ. ಮೊಹಮ್ಮದ್ ರಫಿ, ಮಾರುತಿ ಗಾರಂಪಳ್ಳಿ, ಬಾಬು ಶೇಖ, ಸಿದ್ದಣ್ಣ ರಂಗನೂರ, ಹಣಮಂತ ಇಟಗಿ, ಮಹೇಶ್ ಕಡಗದ ಸೇರ್ಪಡೆಕೊಂಡರು.
ಈ ಸಂದರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ, ತಾಲೂಕು ವಕ್ತಾರ ಶರಣು ಪಾಟೀಲ್, ಅಬ್ದುಲ್ ಬಾಸಿದ, ಆರ್ ಗಣಪತರಾವ್, ಶರಣಗೌಡ ಪಾಟೀಲ್, ದತ್ತಾತ್ರೇಯ ರೈಗೋಳ, ಬಸವರಾಜ ಕಡಬೂರ, ಸಂತೋಷ ಗುತ್ತೇದಾರ, ಉಲ್ಹಾಸ ಕುಮಾರ, ಖುದುಸ ಬಳಗಾರ, ಪುಂಡಲೀಕ್, ಮಲ್ಲಿನಾಥ್.ಎಸ್ ವಗ್ಗಿ, ಜಗದೀಶ್ ಪಾಟೀಲ್, ಶೇಖ ಫರೀದ್, ಸಿದ್ದು ಪೂಜಾರಿ, ರವೀಂದ್ರ ಪೂಜಾರಿ, ರಾಜು ಬಾಬು ಪವಾರ್ ಇದ್ದರು.

Related