“ಸೇತುವೆ ನಿರ್ಮಾಣ ಗ್ರಾಮಸ್ಥರ ಆಗ್ರಹ”

“ಸೇತುವೆ ನಿರ್ಮಾಣ ಗ್ರಾಮಸ್ಥರ ಆಗ್ರಹ”

ಚಿಂಚೋಳಿ: ತಾಲೂಕಿನ ಗಾರಂಪಳ್ಳಿ ಗ್ರಾಮದ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಸಮುದಾಯ ಶವಸಂಸ್ಕಾರ ಮಾಡಲು ಸ್ಮಶಾನ ಭೂಮಿಗೆ ಶವವನ್ನು ತೆಗೆದುಕೊಂಡು ಹೋಗಲು ಸೇತುವೆ ಇಲ್ಲದೆ ಮಳೆಗಾಲದಲ್ಲಿ ನಾಲದ ತುಂಬೆಲ್ಲ ನೀರು ನಿಂತಿರುವುದರಿಂದ ಶವಸಂಸ್ಕಾರ ಮಾಡಲು ದಿನಪೂರ್ತಿ ಕಾಯುವಂಥ ಸಮಸ್ಯೆ ಉಂಟಾಗಿದೆ.
ನೀರಿನಲ್ಲಿಯೇ ಶವಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನ ಭೂಮಿಗೆ ಮೃತರ ಶವವನ್ನು ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಲು ಅನುಕೂಲವಾಗುವಂತೆ ನಾಲಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಶರಣಮ್ಮ ಜಗನ್ನಾಥ್ ಹಡಪದ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಆಗ್ರಹಿಸಿದರು.

Related