ಬಿಜೆಪಿ ಅಧಿಕಾರಾವಧಿ ಪೂರ್ಣಗೊಳ್ಳುತ್ತಾ?

ಬಿಜೆಪಿ ಅಧಿಕಾರಾವಧಿ ಪೂರ್ಣಗೊಳ್ಳುತ್ತಾ?

ದಾವಣಗೆರೆ : ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮಹಾಮಾರಿ ಕೊರೋನಾ ಸೋಂಕು, ರಾಜ್ಯ ರಾಜಕೀಯ, ಸಿಎಂ ಬಿಎಸ್‌ವೈ ಅಧಿಕಾರ ಕುರಿತು ಮಾತನಾಡಿದ್ದಾರೆ.

ಆಶ್ವೀಜ ಕಾರ್ತೀಕ ಮಾಸದಲ್ಲಿ ಕೊರೋನಾ ಸೋಂಕು ಉಲ್ಬಣವಾಗುತ್ತೆ ಎಂದಿದ್ದೆ. ಇದೀಗ ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಶಾಲಾ-ಕಾಲೇಜಗಳು ಪುನರ್ ಆರಂಭವಾದರೂ ಮತ್ತೆ ಮುಚ್ಚಲಿವೆ. ಕೊರೋನಾ ಎರಡನೇ ಹಂತದಲ್ಲಿ ಪರಿವರ್ತನೆಯಾಗಲಿದೆ. ಅದು ಮಾನಸಿಕ ಕ್ಷೋಭೆಯಿಂದ ಬರಲಿದೆ, ಸಾವು ತರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.

ಇನ್ನು ಸಿಎಂ ಯಡಿಯೂರಪ್ಪ ಅಧಿಕಾರಾವಧಿ ಪೂರ್ಣಗೊಳಿಸುತ್ತಾರಾ? ಎಂದು ಸುದ್ದಿಗಾರರು ಕೋಡಿಮಠದ ಶ್ರೀಗಳನ್ನು ಕೇಳಿದರು. ಇದಕ್ಕೆ ಶ್ರೀಗಳು ‘ನೋ ಕಮೆಂಟ್’ ಎಂದಷ್ಟೇ ಹೇಳಿದರು.

Related