ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ

ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ

ಗಜೇಂದ್ರಗಡ : ಎಸ್ ಎಮ್ ಭೂಮರಡ್ಡಿ ಪ್ರಥಮ ದರ್ಜೆ ಕಾಲೇಜು ಎನ್.ಎಸ್.ಎಸ್ ಘಟಕ 1 ಮತ್ತು 2 ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ 158ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮ ನಡೆಯಿತು.

ಈ ವೇಳೆ ಪ್ರಾಚಾರ್ಯರಾದ  ವ್ಹಿ.ಬಿ ಮರದ ಗುರುಗಳು ಅಧ್ಯಕ್ಷತೆ ವಹಿಸಿದ್ದರು ದೇಶದ ಅಭಿವೃದ್ಧಿಗೆ ಯುವಜನತೆ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಚರಿತ್ರೆಯನ್ನು ಅರಿಯಬೇಕು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಎಸ್.ಎಸ್ ಚುಂಚಾ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿಗಳಾದ ಬಿ ವಿ ಮುನವಳ್ಳಿ ಮಾತನಾಡಿ, ಎಲ್.ಕೆ ವದ್ನಾಳ, ಡಾ. ಎಸ್.ಎಚ್ ಪವಾರ್, ಎಸ್.ಸಿ ಬಂಡಿಹಾಳ, ಎಚ್.ಎಚ್ ಮಾದರ, ಬಿ.ಇ ಹಡಪದ, ಶ್ರೀಮತಿ ವೀಣಾ ಗಡ್ಡಂ, ಆಯ್ ಎನ್ ಹಾಳಿ, ಎನ್.ಎಸ್ ಎಸ್ ಅಧಿಕಾರಿಗಳಾದ ಎಲ್.ಕೆ ಹಿರೇಮಠ, ಎಸ್.ಕೆ ಕಟ್ಟಿಮನಿ, ಕುಮಾರಿ ರಾಧಿಕಾ ಕುಂಬಾರ, ಕುಮಾರಿ ವಿಜಯಲಕ್ಷ್ಮೀ, ವಿದ್ಯಾರ್ಥಿಗಳು ಇದ್ದರು

Related