ಮೈತ್ರಿ ಬೆನ್ನಲ್ಲೇ JDSಗೆ ಬಿಗ್ ಶಾಕ್..!

ಮೈತ್ರಿ ಬೆನ್ನಲ್ಲೇ JDSಗೆ ಬಿಗ್ ಶಾಕ್..!

ಬೆಂಗಳೂರು,ಸೆ.23: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಕಣಕ್ಕೆ ಇಳಿಯಲಿದ್ದು, ಇಂತಹ ಮೈತ್ರಿ ವಿರುದ್ಧ ಸಿಡೆದೆದ್ದಂತ ಜೆಡಿಎಸ್ ಉಪಾಧ್ಯಕ್ಷ ಶಫೀವುಲ್ಲಾ ತಮ್ಮ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ತಮ್ಮ ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ತಿಳಿಸಿದ್ದಾರೆ.

ಇನ್ನೂ ಈ ವಿಚಾರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅವರ ಭವಿಷ್ಯಕ್ಕಾಗಿ ಅವರು ಎಲ್ಲಿಗಾದರೂ ಹೋಗಲಿ. ನಾವು ಅಡ್ಡಗಾಲು ಹಾಕೋದಿಲ್ಲ ಅಂತ ಹೇಳಿದರು.

ರಾಜ್ಯದ ಹಿತಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಅದರ ಹೊರತಾಗಿ ಮತ್ತೇನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಂದ ಹೆಚ್ಚು ಸೀಟು ಗೆಲ್ಲೋ ಪ್ರಯತ್ನ ನಡೆಯಲಿದೆ ಎಂದರು.

Related