ಗ್ರಂಥಾಲಯಕ್ಕೆ 25ಲಕ್ಷ ರೂ : ಬೀಮನಾಯ್ಕ್

ಗ್ರಂಥಾಲಯಕ್ಕೆ 25ಲಕ್ಷ ರೂ : ಬೀಮನಾಯ್ಕ್

ಕೊಟ್ಟೂರು : ತಾಲೂಕಿನಲ್ಲಿ ಮೂರು ಕೋಟಿ ಐವತ್ತು ಲಕ್ಷ ರೂಪಾಯಿ ಕಾಮಗಾರಿ ಉಧ್ಘಾಟಿಸಿ, ಹ್ಯಾಳ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿ ಭೂಮಿ ಪೂಜೆ ಚಾಲನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ 25ಲಕ್ಷ ರೂಪಾಯಿ ಎಚ್.ಕೆ.ಆರ್.ಡಿ.ಪಿ ಅನುಧಾನದಲ್ಲಿ ನೀಡಲಾಗುವುದು ಎಂದು ಹಗರಿಬೊಮನಹಳ್ಳಿ ಶಾಸಕ ಬೀಮನಾಯ್ಕ ಹೇಳಿದರು.

ತಾಲೂಕಿನ ಹತ್ತು ಗ್ರಾಮ ಪಂಚಾಯಿತಿ ಹತ್ತು ಸ್ಥಾನ ಕೇಂದ್ರಗಳಲ್ಲಿನ ಹ್ಯಾಳ್ಯ ಗ್ರಾಮ ಪಂಚಾಯಿತಿ ಕೇಂದ್ರ ನಾಲ್ಕನೇ ಗ್ರಂಥಾಲಯ ಎಂದರು. ಬಹಳ ದಿನಗಳ ಬೇಡಿಕೆ ಮುಖ್ಯ ರಸ್ತೆ 35ಲಕ್ಷ 80ಸಾವಿರ ರೂ. ಕೆ. ಕೆ.ಆರ್. ಡಿ ಅನುದಾನ ಸಿ.ಸಿ ರಸ್ತೆ ಮತ್ತು ಚರಂಡಿ ಭೂಮಿ ಪೂಜೆ ನೆರವೇರಿಸಿದರು ,ಸ.ಹಿ ಪಾ.ಶಾಲ1 ಕೊಠಡಿ 10ಲಕ್ಷ ರೂ ,ಸ.ಹಿ.ಪೌ.ಶಾಲೆ ಕೊಠಡಿ 32ಲಕ್ಷ ರೂ ,ಮಲ್ಲನಾಯಕನ ಹಳ್ಳಿ ಆದರ್ಶ ಗ್ರಾಮ ಯೋಜನೆ 75ಲಕ್ಷರೂ ಗಳು ಭೂಮಿ ಪೂಜೆ, ಮೊತಿಕಲ್ಲು ತಾಂಡ ಆದರ್ಶ ಗ್ರಾಮ 11ಲಕ್ಷ ನಲವತ್ತು ಸಾವಿರ ರೂ.ಲೋಟನ ಕೇರಿ ಸ.ಪ್ರಾ.ಹಿ 1ಶಾಲ ಕೊಠಡಿ ಬೇವೂರು ಸ .ಪಾ.ಶಾಲೆ ಕೊಠಡಿ ಕುಡಿಯುವ ನೀರು 10ಲಕ್ಷ 34ಸಾವಿರ ರೂ, ದೂಪದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೊಲ್ಲರ ಹಳ್ಳಿ ಸಿ.ಸಿ ರಸ್ತೆ ಮತ್ತು ಚರಂಡಿ 15ಲಕ್ಷ ರೂ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹ್ಯಾಳ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಂ ಜೆ ಹರ್ಷವರ್ಧನ್, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್ ಇನ್ನಿತರರಿದ್ದರು.

Related