ರಾಯಚೂರು: ಮುಸ್ಲಿಂ ಅಹಮದೀಯರ ಮೌಲಿ ಖಾಜಿಯವರು ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶವನ್ನು ಸಾರುತ್ತಿರುವ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೇವಗತಲ್ ಗ್ರಾಮದಲ್ಲಿ ಸಂದೇಶ ಸಾರಲು ಬಂದಿರುವ ಮೌಲಿ ಖಾಜಿ ಮೇಲೆ ಮುಸ್ಲಿಮರೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಭೂಮಿ ಮೇಲೆ ನಾವೆಲ್ಲರೂ ಒಂದೇ. ಗಂಡು ಹೆಣ್ಣು ಎನ್ನುವ ಭೇದ ಭಾವ ಮಾತ್ರ ಹೊಂದಿ ನಾವೆಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕೆಂದು ಭಾವೈಕ್ಯತೆ ಸಂದೇಶ ಸಾರುವುತ್ತಿರುವ ಸಂದರ್ಭದಲ್ಲಿ ಏಕೈಕ ಗ್ರಾಮಸ್ಥರು ಮೌಲಿ ಖಾಜಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ
ಇನ್ನು ವಿಜಯನಗರ ಜಿಲ್ಲೆ ಹೊಸಪೇಟೆಯಿಂದ ಬಂದು ದೇವದುರ್ಗ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಖಾಜಿ ಮೊಹಮ್ಮದ್ ರಫಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ.
ಮುಸ್ಲಿಂನ ಅಹಮದೀಯ ತತ್ವ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿ ಮುಸ್ಲಿಂ ಪ್ರಮುಖ ಪಂಗಡಗಳ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿ ಪ್ರಚಾರ ಮಾಡದಂತೆ ಅಹಮದೀಯ ಮೌಲ್ವಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವೇಳೆ ಮುಸ್ಲಿಂ ಪ್ರಮುಖ ಪಂಗಡಗಳ ಹಿರಿಯರು ಹಲ್ಲೆ, ಹಿಂಸಾಚಾರ ಮಾಡದಂತೆ ಯುವಕರಿಗೆ ಸಲಹೆ ನೀಡಿದ್ದಾರೆ.
ಆಗ ಪ್ರಚಾರಕ್ಕೆ ಬಂದ ಅಹಮದೀಯರನ್ನು ಬಿಟ್ಟು ಕಳಿಸಲಾಗಿದೆ. ಆದರೆ ಮಸೀದಿಗಳಲ್ಲಿ ಮತ್ತು ಮುಸ್ಲಿಂ ಬಡಾವಣೆಯಲ್ಲಿ ಅಹಮದೀಯರು ಕಂಡರೇ ಮಾಹಿತಿ ನೀಡುವಂತೆ ಕರೆ ನೀಡಲಾಗಿದೆ. ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಅಹಮದೀಯರು ಈ ಬಗ್ಗೆ ಎಸ್ಪಿ ನಿಖಿಲ್. ಬಿಗೂ ದೂರು ನೀಡಿದ್ದಾರೆ.