ಅರಳಿ ಕಟ್ಟೆ ಹಾಗೂ ನಾಗದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ

ಅರಳಿ ಕಟ್ಟೆ ಹಾಗೂ ನಾಗದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ

ಬೆಂಗಳೂರು: ನ್ಯಾನಪ್ಪನಹಳ್ಳಿಯ ಸುಗುಮ ಲೇಔಟ್ ನಲ್ಲಿ ಅರಳಿ ಕಟ್ಟೆ ಹಾಗೂ ನಾಗದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಸತೀಶ್‌ ರೆಡ್ಡಿರವರು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಹಾಗೆಯೆ ವಿವಿಧ ದೇವರ ಪ್ರತಿಷ್ಠಾಪನೆ ವಿಘ್ನೇಶ್ವರ ಪೂಜೆ, ಮಹಾಗಣಪತಿ ಹೋಮ ನವಗ್ರಹ ಹೋಮ, ದುರ್ಗಾ-ಮೃತ್ಯುಂಜಯ ಹೋಮ, ನಾಗದೇವತಾ ಹೋಮ ಅಧಿವಾಸ ಹೋಮ, ಕಳಾಹೋಮ, ನಾಗದೇವತಾ ನೇತ್ರೋನ್ನಿಲನ ಪ್ರಾಣ ಪ್ರತಿಷ್ಠಾಪನೆ, ಧೇನು-ದರ್ಪಣ ದರ್ಶನ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಈ ಸಂದರ್ಭದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳ ಆಶಿರ್ವಚನ ಪಡೆದ ಬಳಿಕ ಮಾತನಾಡಿ ಸ್ಥಳದಲ್ಲೇ ದೇವಸ್ಥಾನಕ್ಕೆ ೧೦ ಲಕ್ಷ ರೂ.ಗಳನ್ನು ಎಲ್ಲರ ಸಮ್ಮೂಖದಲ್ಲಿ ನೀಡಿದರು. ಹಾಗೆಯೆ ದೇವರ ಪ್ರತಿಷ್ಠಾಪನೆಯಿಂದ ಇಲ್ಲಿಯ ಜನರಿಗೆ ಆ ದೇವರು ಒಳ್ಳೆಯ ಆರೋಗ್ಯ ನೀಡಿಲಿ, ಹಾಗೂ ಈ ಪುಣ್ಯ ಕಾರ್ಯಕ್ಕೆ ಕಾರಣೀಬುತರಾದ ಪ್ರತಿಯೊಬ್ಬರಿಗು ಹಾರೈಸಿ ಧನ್ಯವಾದಗಳನ್ನು ತಿಳಿಸಿದರು.
ಈ ಪುಣ್ಯ ಕಾರ್ಯಕ್ರಮದಲ್ಲಿ ಕಳಸ ಹೊತ್ತ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಗೋಕುಲ್ ಗ್ರೂಪ್ಸ್ ವತಿಯಿಂದ ೧೦೦೦ ಉಚಿತ ಸೀರೆಗಳನ್ನು ವಿತರಿಸಲಾಯಿತು.

ಇದಲ್ಲದೇ ಕಾರ್ಯಕ್ರಮ ನಿಮಿತ್ತ ಗ್ರಾಮಸ್ತರಿಗೆ ಅನ್ನ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿನ್ಯಾನಪ್ಪನಹಳ್ಳಿ ಬಿಜೆಪಿ ವಾರ್ಡ್ ಅಧ್ಯಕ್ಷರಾದ ಮಂಜುನಾಥ್ ,ಗ್ರಾಮದ ಮುಖಂಡರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related