ಮತ್ತೊಬ್ಬ ನಟ ಆತ್ಮಹತ್ಯೆಗೆ ಶರಣು

ಮತ್ತೊಬ್ಬ ನಟ ಆತ್ಮಹತ್ಯೆಗೆ ಶರಣು

ಮುಂಬೈ : ಬಿಹಾರ ಮೂಲದ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಬ್ಬ ಉದಯೋನ್ಮುಖ ನಟ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಬಂದಿದೆ.

ಹಿಂದಿ ಚಿತ್ರರಂಗ, ಕಿರುತೆರೆ ಲೋಕ ಕೆಲ ತಿಂಗಳುಗಳಿಂದ ಸಾವು ನೋವಿನ ಸುದ್ದಿಯಲ್ಲೇ ಮುಳುಗಿದೆ. ನಟ ಅಕ್ಷತ್ ಉತ್ಕರ್ಷ್ ಅವರು ಮುಂಬೈನ ತಮ್ಮ ಫ್ಲಾಟಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿದರು.

ಆತ ಕೂಡಾ ಬಿಹಾರ ಮೂಲದವನಾಗಿದ್ದು, ನಟ ಅಕ್ಷತ್ ಉತ್ಕರ್ಷ್. (26) , ಮೃತರ ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದು ಅಂಬೋಲಿ ಠಾಣಾ ಪೊಲೀಸರು ಹೇಳಿದ್ದಾರೆ. ಅಕ್ಷತ್ ಅವರು ಒಂದೆರಡು ಭೋಜ್‌ಪುರಿ ಚಲನಚಿತ್ರಗಳಲ್ಲಿ ಮತ್ತು ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು.

ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೂರು ಗಂಟೆಗಳ ಮೊದಲು ಅಕ್ಷತ್ ಮನೆಯವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದ ಮತ್ತು ಮಾತಿನಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ, ನಾರ್ಮಲ್ ಆಗಿದ್ದ ಎಂದು ಅವರ ತಂದೆ ರಾಜು ಚೌಧರಿ ಹೇಳಿದ್ದಾರೆ.

Related