ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಕೇಂದ್ರದ ವಾರ್ಷಿಕೋತ್ಸವ  ಕಾರ್ಯಕ್ರಮ

ಚಿಂಚೋಳಿ: ಪಟ್ಟಣದ ಚಂದಾಪುರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಗುರುವಾರ ದಂದು ವಾರ್ಷಿಕೊತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು .
ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಪುಟಾಣಿ ಮಕ್ಕಳೊಂದಿಗೆ ಸಂಸ್ಥೆಯ ಒಕ್ಕೂಟ ಅಧ್ಯಕ್ಷ ನರಸಮ್ಮ ಲಕ್ಷ್ಮಣ ಆವುಂಟಿ ಉದ್ಘಾಟಿಸಿದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಪೂರ, ಶಿವರಾಜ್ ಮಾಲಿಪಾಟೀಲ್ ಚಿಮ್ಮಾಯಿದಲಾಯಿ ಮಾತನಾಡಿದರು.
ಸಂಸ್ಥೆಯ ಯೋಜನಾದಿಕಾರಿ ನಾಮದೇವ ದೇಶಪಾಂಡೆ, ಪುರಸಭಾ ಸದಸ್ಯ ರಾಧಾಬಾಯಿ ಓಲಗೆರಿ, ಒಕ್ಕೂಟ ಸದಸ್ಯ ನರ್ಮದಾ ಭಾವಜಿ, ವಲಯಾಧಿಕಾರಿಗಳಾದ ಸತೀಶ್, ಮಹಾದೇವಿ ಮಂಜುನಾಥಸ್ವಾಮಿ, ಇದ್ದರು.

Related