ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಮಂಡ್ಯ :  ಜಿಲ್ಲೆಯ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದ ತಾಯಿ ನಿವೇದಿತಾ ತನ್ನ ಇಬ್ಬರು ಮಕ್ಕಳಾದಂತ ಗಾನವಿ(6) ಹಾಗೂ ಉಲ್ಲಾಸ್(4) ರನ್ನು ಮೊದಲು ನೇಣುಹಾಕಿದ್ದಾರೆ. ಮಕ್ಕಳು ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಳೆದ 7 ವರ್ಷಗಳ ಹಿಂದೆ ನಲ್ಲಹಳ್ಳಿಯ ನಿವಾಸಿ ನಿವೇದಿತಾ ಕೃಷ್ಣೇಗೌಡ ಎಂಬುವರೊಂದಿಗೆ  ವಿವಾಹವಾಗಿದ್ದರು.  ಗಂಡ-ಹೆಂಡತಿಯರಿಬ್ಬರು ಅನ್ಯೂನ್ಯವಾಗಿಯೇ ಸಂಸಾರ ನಡೆಸುತ್ತಿದ್ದರಂತೆ. ಆದರೆ ನಿವೇದಿತಾ ತನ್ನ ಇಬ್ಬರು ಮಕ್ಕಳೊಂದಿಗೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ  ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related