ಭೂಸನೂರುನಲ್ಲಿ ಪವಾಡ..?

ಭೂಸನೂರುನಲ್ಲಿ ಪವಾಡ..?

ಕಲಬುರ್ಗಿ, ಮಾ. 5 : ಶಬ್ಬರಿಮಲೆ ಅಯ್ಯಪ್ಪ ಮಾದರಿಯ ದಿವ್ಯ ಜ್ಯೋತಿಯಂತೆ ಒಪ್ಪತ್ತೇಶ್ವರರ ವಿರಕ್ತ ಮಠದ ಗದ್ದುಗೆಯಿಂದ ಮಧ್ಯರಾತ್ರಿ ದಿವ್ಯ ಜ್ಯೋತಿಯೊಂದು ಹಾದುಹೋಗಿದೆ.
ಆಳಂದ ತಾಲೂಕಿನ ಭೂಸನೂರು ಒಪ್ಪತ್ತೇಶ್ವರ ವಿರಕ್ತಮಠದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಬೆಳಕಿನ ಜೋತಿ ಹಾದು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದೆ. ಮಾ.1ರಂದು ಮಧ್ಯರಾತ್ರಿ ಹನ್ನೆರಡು ಗಂಟೆ ಮೂವತ್ತೈದು ನಿಮಿಷದಲ್ಲಿ ಬೆಳಕು ಹಾದು ಹೋಗಿದೆ. ಜ್ಯೋತಿ ಹಾದು ಹೋಗಿರುವುದನ್ನು ಕಣ್ಣಾರೆ ಕಂಡಿರುವ ಮಠದ ಪೀಠಾಧಿಪತಿ ನಿಜಗುಣಾನಂದ ಸ್ವಾಮೀಜಿ, ನಂತರ ತಮಗಾಗಿರುವ ಅನುಭವವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ನಿಜಗುಣಾನಂದ ಸ್ವಾಮೀಜಿಯ ಹೇಳಿಕಯನ್ನು ಆಧರಿಸಿ ಪರೀಕ್ಷೆ ನಡೆಸಿದಾಗ ಭಕ್ತರಿಗೆ ಅಚ್ಚರಿ ಕಂಡಿದೆ. ಅಂದಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಗಮನಿಸಿದಾಗ ಬೆಳಕಿನ ಜ್ಯೋತಿ ಹಾದುಹೋಗಿರುವುದು ಖಾತ್ರಿಯಾಗಿದೆ. ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಕಂಡು ಗ್ರಾಮದ ಜನತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Related