ಖಾಸಗಿ ಕಾರ್ಯಕ್ರಮದಲ್ಲಿ ದಚ್ಚು-ವಿಜಿ ಜೊತೆ ಜೊತೆಯಲಿ

ಖಾಸಗಿ ಕಾರ್ಯಕ್ರಮದಲ್ಲಿ ದಚ್ಚು-ವಿಜಿ ಜೊತೆ ಜೊತೆಯಲಿ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಸುಮಾರು ಆರು ತಿಂಗಳ ಕಾಲ ಜೈಲು ಸೆರೆವಾಸ ಅನುಭವಿಸಿದ್ದರು.

ಇನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಪತಿಯನ್ನು ಹೇಗಾದರೂ ಮಾಡಿ ಜೈಲಿನಿಂದ ಬಿಡುಗಡೆ ಮಾಡಿಸಬೇಕೆಂದು ಪಡಬಾರದ ಕಷ್ಟಪಟ್ಟು ಎಲ್ಲಾ ದೇವರುಗಳ ಮೊರೆ ಹೋಗಿ ಕೊನೆಗೂ ತನ್ನ ಗಂಡನನ್ನು ಜೈಲು ಸೆರೆವಾಸದಿಂದ ಮುಕ್ತಿಗೊಳಿಸಿದ್ದಾರೆ.

ಹೌದು, ನಟ ದರ್ಶನ್ ಅವರು ಜೈಲು ಸೇರಿದಾಗ ಅವರ ಪತ್ನಿ ವಿಜಯಲಕ್ಷ್ಮಿ ಅವರು ಪಡಬಾರದ ಕಷ್ಟಪಟ್ಟು ದರ್ಶನ್ ರವರನ್ನು ಜಾಮೀನು ಮೇಲೆ ಹೊರತಂದಿದ್ದಾರೆ.  ಇದನ್ನೂ ಓದಿ: ದರ್ಶನ್ ಗೆಟಪ್‌ಗೆ ಫ್ಯಾನ್ಸ್ ಫೀದಾ!

ಜಾಮೀನು ಮೇಲೆ ಹೊರ ಬಂದಿರುವ ನಟ ದರ್ಶನ್ ಅವರು ಹೆಚ್ಚಾಗಿ ತನ್ನ ಧರ್ಮ ಪತ್ನಿ ಅವರ ಜೊತೆ ಎಲ್ಲಾ ಕಡೆಗಳಲ್ಲಿ ಓಡಾಡುತ್ತಿದ್ದು, ಅದರಂತೆ (ಭಾನುವಾರ ಏಪ್ರಿಲ್ 20) ರಂದು ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಮತ್ತು ದರ್ಶನ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದು ದರ್ಶನ್ ಹಾಗೂ ವಿಜಯಲಕ್ಷ್ಮಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಈ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿಯು ಬೀಳದಿರಲಿ ಎಂದು ಹಾರೈಸಿದ್ದಾರೆ.

ಇನ್ನು ನಟ, ನಿರ್ಮಾಪಕ ಬಿ. ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ದಂಪತಿ ಜೊತೆ ದರ್ಶನ್ ಅವರಿಗೆ ಒಳ್ಳೆಯ ಒಡನಾಟ ಇದೆ. ಶೈಲಜಾ ಹಾಗೂ ಸುರೇಶ್ ಪುತ್ರಿ ಚಂದನಾ ಎಸ್. ನಾಗ್ ಏಪ್ರಿಲ್ 20ರಂದು ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದಿದೆ. ಇದಕ್ಕೆ ದರ್ಶನ್ ಅವರು ಪತ್ನಿ ಜೊತೆ ಆಗಮಿಸಿದ್ದಾರೆ.

 

Related