ಯುವನಿಧಿ ಯೋಜನೆಯು ಯುವ ಜನತೆಗೆ ಇದು ನಿಧಿ ಇದ್ದ ಹಾಗೆ

ಯುವನಿಧಿ ಯೋಜನೆಯು ಯುವ ಜನತೆಗೆ ಇದು ನಿಧಿ ಇದ್ದ ಹಾಗೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದಾರೆ.

ರಾಜ್ಯದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ದೊರೆಯುವವರೆಗೆ ಅಥವಾ ಗರಿಷ್ಠ ಎರಡು ವರ್ಷದವರೆಗೆ ಯುವ ನಿಧಿ ಯೋಜನೆಯು ದೊರೆಯಲಿದ್ದು, ರಾಜ್ಯದ ಯುವಕ ಯುವತಿಯರ ಬದುಕಿನ ಆಶಾಕಿರಣವಾಗಲಿದೆ ಈ ಯುವನಿಧಿ ಯೋಜನೆ.

ಯುವನಿಧಿ ಯೋಜನೆಯು ಖಂಡಿತವಾಗಿಯೂ ಯುವ ಜನತೆಗೆ ಇದು ನಿಧಿ ಇದ್ದ ಹಾಗೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಮತ್ತಷ್ಟು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಿ ಸಂತೋಷದಿಂದ ತಮ್ಮ ಜೀವನವನ್ನು ಬೆಳೆಸಿಕೊಳ್ಳಲಿ ಎನ್ನುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.

Related