ಭಾರತದ ಹೆಮ್ಮೆಯ ಪುತ್ರನ ಯುವ ದಿನಾಚರಣೆ

ಭಾರತದ ಹೆಮ್ಮೆಯ ಪುತ್ರನ ಯುವ ದಿನಾಚರಣೆ

ಮಹದೇವಪುರ : ಆಧ್ಯಾತ್ಮಿಕ ಲೋಕದ ಮಹಾಚೇತನ ಮತ್ತು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯದಿನವನ್ನೆ, ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಭಾ.ಜ.ಪ ಬೆಂಗಳೂರು ನಗರ ಜಿಲ್ಲಾ ಪ್ರಭಾರಿ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರ ಸೇವಾ ಟ್ರಸ್ಟನ ಟ್ರಸ್ಟಿ ಗೋಪಿನಾಥ್ ರೆಡ್ಡಿ ಹೇಳಿದರು.

ಈ ವೇಳೆ ಮಾತನಾಡಿ, ಕ್ಷೇತ್ರದ ಮಾರತಹಳ್ಳಿ ಬಳಿಯ ಭಾ.ಜ.ಪ ಕಚೇರಿಯಲ್ಲಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಾರತದ ಇತಿಹಾಸದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮುಕ್ತಿಯನ್ನು ಹೊಂದಬೇಕು, ತಮ್ಮ ಜೀವನದ ಉತ್ತಮ ಗುರಿಯನ್ನು ಸಾಧಿಸಿ ದೇಶ ಕಟ್ಟುವ ಕೆಲಸಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.  ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಎಂದೆಂದಿಗೂ  ಜೀವಂತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡ ಜಯಚಂದ್ರ ರೆಡ್ಡಿ, ರಾಜಾರೆಡ್ಡಿ, ಮಹೇಂದ್ರ ಮೋದಿ, ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಿಥುನ್ ರೆಡ್ಡಿ, ಬೆಂ.ನಗರ ಜಿಲ್ಲಾ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ರಾಜೇಶ್, ನಗರ ಮಂಡಲ ಯುವಮೋರ್ಚಾ ಅಧ್ಯಕ್ಷ ಪವನ್ ಕುಮಾರ್, ಭಾ.ಜ.ಪ ಹಿರಿಯ ಹಾಗೂ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Related