ರಾಯಚೂರು : ದೇವದುರ್ಗ ಪಟ್ಟಣದ ಶಾಂತಿ ನಗರದಲಿ ಮೈಕ್ ಹಚ್ಚ ಬೇಡಿ ಎಂದು ಬುದ್ಧಿವಾದ ಹೇಳಲು ಬಂದ ದೇವದುರ್ಗದ ಲೇಡಿ ತಹಸೀಲ್ದಾರ್ಗೆ ಆವಾಜ್ ಹಾಕಿದ ಯುವಕರು, ಸುಪ್ರೀಂಕೋರ್ಟ್ ಕಾನೂನಿನ ಪಾಠ ಮಾಡಿದ್ದಾರೆ.
ವರ್ಷದಲ್ಲಿ ಹನ್ನೊಂದು ದಿನ ಕೂರಿಸುವ ಗಣೇಶನಿಗೆ ನಿರ್ಬಂಧ ಹಾಕುವ ನೀವುಗಳು ಮಸೀದಿಯಲ್ಲಿ ವರ್ಷ ಪೂರ್ತಿ ಮೈಕ್ ಹಾಕಿ ಗದ್ದಲ ಮಾಡುವವರಿಗೆ ಏಕೆ ನಿರ್ಬಂಧ ಹಾಕಲ್ಲ? ಸುಪ್ರೀಂ ಕೋರ್ಟ್ ಆದೇಶ ಗೊತ್ತೈತಿ ನಿಮ್ಗೆ… ಎಂದು ಯುವಕರು ತಹಸೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡರು.
ಯುವಕರ ಆವಾಜ್ಗೆ ಸೈಲಂಟ್ ಆಗಿ ನಿಂತ ತಹಸೀಲ್ದಾರ್, ಸ್ಥಳಕ್ಕೆ ಪೊಲೀಸರನ್ನು ಕರೆಸಿದರು. ಪೊಲೀಸರ ಬಳಿಯೂ ಅರೆಸ್ಟ್ ವಾರೆಂಟ್ ಕೊಡ್ರೆ ನಾವೆಲ್ಲರೂ ಬರ್ತೇವೆ.. ನಾವು ಗಣೇಶ ಹಬ್ಬ ಮಾಡೋಕು ನೀವು ಯಾಕೆ ಅಡ್ಡಿ ಮಾಡೋದು? ನಾವು ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದೇವೆ… ಎಂದು ಅವಾಜ್ ಹಾಕಿದರು.