ಮೈಸೂರು-ಕೊಡಗು ಕ್ಷೇತ್ರಕ್ಕೆ ಯತೀಂದ್ರ ಉತ್ತಮ ಆಯ್ಕೆ: ತನ್ವೀರ್ ಸೇಟ್

ಮೈಸೂರು-ಕೊಡಗು ಕ್ಷೇತ್ರಕ್ಕೆ ಯತೀಂದ್ರ ಉತ್ತಮ ಆಯ್ಕೆ: ತನ್ವೀರ್ ಸೇಟ್

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಅಭ್ಯರ್ಥಿಯಾಗಬೇಕೆಂದು ಹೈ ಕಮಾಂಡ್ ಮತ್ತು ಕರ್ನಾಟಕದ ಕಾಂಗ್ರೆಸ್ ನಾಯಕರುಗಳು ತೀರ್ಮಾನ ಕೈಗೊಳ್ಳುತ್ತಾರೆ ಆ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ, ಅಭ್ಯರ್ಥಿ ಯಾರೇ ಆದರೂ ಕೂಡ ನಾವು ಅವರ ಪರವಾಗಿ ಸತತವಾಗಿ ಕೆಲಸ ಮಾಡಿ ಆ ಅಭ್ಯರ್ಥಿಯನ್ನು ಗೆಲ್ಲುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತನ್ವೀರ್ ಸೇಟ್ ಹೇಳಿದರು

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದರೆ ಉತ್ತಮ ಆಯ್ಕೆ ಅನಿಸಿಕೊಳ್ಳುತ್ತದೆ, ಆದರೆ ವರಿಷ್ಟರು ಬೇರೆಯವರಿಗೆ ಟಿಕೆಟ್ ನೀಡಿದರೂ ಅದೇ ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ತನ್ವೀರ್ ಹೇಳಿದರು.

ಈ ಕ್ಷೇತ್ರ ಕೊಡಗು ಮತ್ತು ಮೈಸೂರು-ಎರಡು ಜಿಲ್ಲೆಗಳನ್ನು ಪ್ರತಿನಿಧಿಸುವುದರಿಂದ ಜನನ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಬೇಕಾಗಿದೆ ಎಂದರು.

 

Related