ಹೆಣ್ಣು ಮಕ್ಕಳ ಎಚ್ಚರಿಕೆ

  • In State
  • August 26, 2021
  • 355 Views
ಹೆಣ್ಣು ಮಕ್ಕಳ ಎಚ್ಚರಿಕೆ

ಸಿಂದಗಿ: ಖಾನಾಪೂರ ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದರೆ ತಾಲೂಕು, ಜಿಲ್ಲಾ ಪಂಚಾಯತಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಹಿಳೆಯರು ಗುರುವಾರ ಎಚ್ಚರಿಕೆ ನೀಡಿದರು. ಮತ್ತಾಬಿ ಮಹಿಳಾ ಸ್ವ ಸಹಾಯ ಸಂಘ, ರೇಣುಕಾದೇವಿ ಮಹಿಳಾ ಸ್ವ ಸಹಾಯ ಸಂಘ, ಭಾಗ್ಯಾವಂತಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಹೊನ್ನಳ್ಳಿಯ ಗ್ರಾಮ ಪಂಚಾಯತಿ ಕಾರ್ಯದರ್ಶಿ ಎಸ್ ಎಮ್ ಜೋಗೂರ, ಗ್ರಾ.ಪಂ ಅಧ್ಯಕ್ಷೆ ದೇವೆಕ್ಕೆಮ್ಮ ದೇವಿಂದ್ರಪ್ಪ ತೊನಶ್ಯಾಳ ಅವರಿಗೆ ಮನವಿ ಸಲ್ಲಿಸಿದರು. ರಸ್ತೆ, ಚರಂಡಿ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಊರಿನಲ್ಲಿರುವ ಕಾಲುವೆಯಿಂದ ನೀರು ಬರದ ಹಾಗೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

Related