ಬೆಂಗಳೂರು : ಪ್ರತಿಪಕ್ಷ ನಾಯಕರಿಗೆ ಟೀಕೆ ಮಾಡುವುದೇ ಕೆಲಸ. ಎಲ್ಲದಕ್ಕೂ ಆರ್ಎಸ್ಎಸ್ ಎಂದು ಬೊಬ್ಬೆ ಹೊಡೆಯುತ್ತಾರೆ. ಇವತ್ತು ಈ ಸ್ಥಾನಕ್ಕೆ ಬರಲು ಆರ್ಎಸ್ಎಸ್ ಕಾರಣ ಅವರ ಐಡಿಯಾಲಜಿಯನ್ನು ನಾನು ಕಲಿತಿದ್ದೇನೆ.
ಮೋದಿ ಪ್ರಧಾನಿಯಾಗಿ ಬರಲು ಆರ್ಎಸ್ಎಸ್ ಕಾರಣ. ಅವರೇ ಅದನ್ನು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ, ಅವರ ಹಿನ್ನೆಲೆ ಏನು ಎಂದು ಮುಖ್ಯಂಮತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿರುವ ಅಂತರಿಕ ಗೊಂದಲ ಬಗೆಹರಿಸಿಕೊಳ್ಳಲಿ. ಇವರು ಎಷ್ಟು ಬಾರಿ ಹೇಳುತ್ತಾರೋ, ಅಷ್ಟು ಆರ್ಎಸ್ಎಸ್ ಬಲಿಷ್ಠವಾಗಲಿದೆ. ಟೀಕೆ ಟಿಪ್ಪಣಿ ಮಾಡಲಿ, ಅದನ್ನು ಚರ್ಚೆ ಮೂಲಕ ಮಾಡಲಿ ಎಂದರು.
ಸಿದ್ಧರಾಮಯ್ಯನವರೇ ನೀವು ವಿಪಕ್ಷ ನಾಯಕರಿದ್ದೀರಿ, ನೀವು ಹೇಳುವ ಮಾತು ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತೆ. ವಿರೋಧ ಪಕ್ಷದ ನಾಯಕರಾಗಿ ಹಗುರವಾಗಿ ಮಾತಾಡಬೇಡಿ. ವಿಪಕ್ಷ ನಾಯಕನಾಗಿ ಉತ್ತಮವಾಗಿ ನಡೆಯಿರಿ ಎಂದು ಸಲಹೆ ನೀಡಿದರು.