ಪ್ರತಾಪ್ ಸಿಂಹ ಏನು ನ್ಯಾಷನಲ್ ಲೀಡರ್?: ಯತೀಂದ್ರ

ಪ್ರತಾಪ್ ಸಿಂಹ ಏನು ನ್ಯಾಷನಲ್ ಲೀಡರ್?: ಯತೀಂದ್ರ

ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹನನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಲು ಅವರೇನು ನ್ಯಾಷನಲ್ ಲೀಡರ್ ಎಂದು ಕಾಂಗ್ರೆಸ್ನ ಶಾಸಕ ಯತೀಂದ್ರ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರು ಕೇವಲ ತಮ್ಮನ್ನೇ ತಾವೇ ದೊಡ್ಡ ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.  ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಾಗಿರುವ ನಮ್ಮ ತಂದೆಯವರು ಸತತ 40 ವರ್ಷಗಳಿಂದ ರಾಜಕೀಯದಲ್ಲಿ ಪಳಗಿದ್ದಾರೆ. ಆದರೆ ಯಾವೊಬ್ಬ ವ್ಯಕ್ತಿಯ ಮೇಲೆ ಅವರು ಹಗೆ ಸಾಧಿಸಿಲ್ಲವೆಂದು ಹೇಳಿದರು.

ಇನ್ನು ನಮ್ಮ ತಂದೆಯವರಿಗೆ ಎಷ್ಟೋ ಜನ ಅನ್ಯಾಯ ಮಾಡಿದರು ಕೂಡ ಅವರ ಮೇಲೆ ಯಾವುದೇ ಕಾರಣಕ್ಕೂ ಹಗೆ ಸಾಧಿಸುವುದಿಲ್ಲ. ಆದರೆ ಪ್ರತಾಪ್ ಸಿಂಹ ಅವರ ಮೇಲೆ ಹೇಗೆ ಹಗೆ ಸಾಧಿಸಲು ಸಾಧ್ಯ?.

ಸಂಸದ ಪ್ರಥಮ್ ಸಿಂಹ ಅವರ ತಮ್ಮ ತಪ್ಪು ಮಾಡಿದ್ದಾರೆ ಆದ್ದರಿಂದ ಅವರ ಮೇಲೆ ಕಾನೂನು ರೀತಿಯ ಕ್ರಮವನ್ನು ತೆಗೆದುಕೊಂಡಿದ್ದಾರೆ ಹೊರತಾಗಿ ಯಾವುದೇ ವೈಯಕ್ತಿಕ ಹಗೆಯನ್ನು ಸಾಧಿಸುವುದಿಲ್ಲವೆಂದು ಹೇಳಿದರು. ಇನ್ನು ಪ್ರತಾಪ್‌ ಅವರು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಆದ್ದರಿಂದ ಕಾನೂನು ರೀತಿಯಲ್ಲಿ ಯಾವ ರೀತಿ ಕ್ರಮ ಜರುಗಿಸಬೇಕೆಂದು ಈಗಾಗಲೇ ಮಾತುಕತೆ ನಡೆದಿದೆ ಎಂದು ಹೇಳಿದರು.

ನಮ್ಮ ತಂದೆಯವರು ತಮ್ಮ ಸ್ವಂತ ರಾಜಕೀಯ ವಿಷಯ ಬಂದಾಗಲೇ ಯಾವತ್ತೂ ಕೂಡ ಇನ್ನೊಬ್ಬರ ಮೇಲೆ ಆರೋಪ ಮಾಡುವುದಾಗಲಿ, ಸುಳ್ಳು ಪ್ರಕರಣಗಳನ್ನು ದಾಖಲೆ ಮಾಡುವುದಾಗಲಿ ಯಾವತ್ತು ಮಾಡಿಲ್ಲ.

ರಾಜ್ಯದ ಇಡೀ ಜನತೆಗೆ ಗೊತ್ತಿದೆ ಸಿದ್ದರಾಮಯ್ಯ ಅವರು ಹೇಗೆ ಇದ್ದಾರೆ. ಹೇಗೆ ರಾಜಕೀಯ ಜೀವನದಲ್ಲಿ ಎಲ್ಲಾ ಕಷ್ಟ ನಷ್ಟಗಳನ್ನು ಎದುರಿಸುತ್ತಾ ಬಂದು ಈಗ ಈ ಸ್ಥಾನದಲ್ಲಿದ್ದಾರೆಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು. ಪ್ರತಾಪ್ ಸಿಂಹ ಕೇವಲ ತಮ್ಮ ಮೈಲೇಜ್ ಜಾಸ್ತಿ ಮಾಡಿಸಿಕೊಳ್ಳಲು ಈ ರೀತಿ ನಮ್ಮ ತಂದೆಯವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.

Related