ಬಿಜೆಪಿ ಪಕ್ಷದವರು ಹೇಳಿದ ಹಾಗೆ ನಾವು ಕೇಳೋಕಾಗಲ್ಲ: ಪರಮೇಶ್ವರ್

ಬಿಜೆಪಿ ಪಕ್ಷದವರು ಹೇಳಿದ ಹಾಗೆ ನಾವು ಕೇಳೋಕಾಗಲ್ಲ: ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹೇಳಿದ ಹಾಗೆ ನಾವು ಕೇಳಿದರೆ ಆಡಳಿತ ಮಾಡೋಕಾಗುವುದಿಲ್ಲವೆಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಹೇಗೆ ಹೇಳುತ್ತಾರೆ ಹಾಗೆ ನಾವು ಮಾಡಿದರೆ ಮುಂದೆ ನಾವು ಆಡಳಿತ ನಡೆಸಲು ಕಷ್ಟವಾಗುತ್ತದೆ ಹಾಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು ಈಗಾಗಲೇ ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಹಾವೇರಿ ರೇಪ್ ಕೇಸ್ ಪ್ರಕರಣದಲ್ಲಿ ಎಸ್‌ಐಟಿ ರಚನೆಗೆ ಆಗ್ರಹಿಸಿದ ವಿಚಾರ ಹಾಗೂ ಕೇಸ್‌ಗೆ ಸಂಬಂಧಿಸಿದವರ ಬಂಧನ ಆಗಿದೆ ಎಂಬ ಸಂತ್ರಸ್ತೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತನಿಖೆ ಆಗುತ್ತಿದೆ ಎಂದರು. ಸಂಪೂರ್ಣ ತನಿಖೆ ಆಗಲಿ. ಅಲ್ಲಿಯವರೆಗೂ ನಾನೇನು ಹೇಳಲ್ಲ. ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದರು.

 

Related