ಮಹಾತ್ಮರ ಜನ್ಮದಿನ ಆಚರಿಸುವ ನಾವು ಸುದೈವಿಗಳು

ಮಹಾತ್ಮರ ಜನ್ಮದಿನ ಆಚರಿಸುವ ನಾವು ಸುದೈವಿಗಳು

ದೇವದುರ್ಗ : ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ಕೊಡುಗೆ ಅಪಾರವಾದದ್ದು ಎಂದು ಉಪತಹಶೀಲ್ದಾರರಾದ ಶ್ರೀನಿವಾಸ್ ಚಾಪೆಲ್ ಅವರು ಹೇಳಿದರು .

ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸರಳವಾಗಿ ಜಯಂತಿ ಆಚರಿಸಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಬದುಕಿನ ನಿರ್ವಹಣೆ ಹಾಗೂ ಅನಿಸಿಕೆಗಳ ಐಕ್ಯತೆಗಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಸಮಾನತೆ ಸಾರಿ. ಗುಲಾಮಗಿರಿ ಪದ್ಧತಿಯನ್ನು ಮುಕ್ತಗೊಳಿಸಿ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ನಮ್ಮ ದೇಶವನ್ನು ಸ್ವಾತಂತ್ರೋತ್ಸವ ದಿನವನ್ನಾಗಿ ಆಚರಿಸಲು ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಅಪಾರವಾಗಿದೆ ಹಾಗೂ ಮಹಾತ್ಮರ ಜನ್ಮದಿನಾಚರಣೆಯನ್ನು ಆಚರಿಸುವ ನಾವುಗಳು ಸುದೈವಿಗಳು ಎಂದರು

Related