“ತುಂಗಭದ್ರ ನದಿ ಪಾತ್ರದ ಜನರಿಗೆ ಎಚ್ಚರಿಕೆ”

“ತುಂಗಭದ್ರ ನದಿ ಪಾತ್ರದ ಜನರಿಗೆ ಎಚ್ಚರಿಕೆ”

ಗಂಗಾವತಿ : ಮುನಿರಾಬಾದ್ ತುಂಗಭದ್ರ ಡ್ಯಾಮ್ ನಿಂದ ಕಂಪ್ಲಿ-ಮಂತ್ರಾಲಯ ಕಡೆಗೆ ಹರಿಯುವ ನದಿಗೆ ಹೆಚ್ಚುವರಿ ನೀರು ಬಿಡುವ ಸಂಭವವಿರುವುದರಿಂದ ನದಿ ಪಾತ್ರದಲ್ಲಿ ಬರುವ ಹಲವಾರು ಗ್ರಾಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ವಿಪತ್ತು ನಿರ್ವಹಣ ತಂಡದಿಂದ ತುಂಗಭದ್ರ ನದಿಗೆ ನೀರು ಹರಿಸುವ ಸಾಧ್ಯತೆ ಇರುವುದರಿಂದ ನದಿ ತೀರಕ್ಕೆ ಬರುವ ಗ್ರಾಮಗಳಲ್ಲಿ ವಿವಿಧ ಇಲಾಖೆಗಳಾದ ಕಂದಾಯ, ಪೊಲೀಸ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಸಂಚರಿಸಿ ಜನರಲ್ಲಿ ನದಿಯ ದಂಡೆಗೆ ಹೋಗದಂತೆ ಜಾಗೃತಿ ಮೂಡಿಸಲಾಯಿತು.

Related