ಪಿಡಿಒ ವಿರುದ್ಧ ಗ್ರಾಮಸ್ಥರು ಕೆಂಡಾಮಂಡಲ

ಪಿಡಿಒ ವಿರುದ್ಧ ಗ್ರಾಮಸ್ಥರು ಕೆಂಡಾಮಂಡಲ

ಕೊಲ್ಹಾರ : ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕರ್ತವ್ಯ ಲೋಪ ಎಸಗುತ್ತಿರುವ ಕೂಡಗಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಬಸವನ ಬಾಗೇವಾಡಿ ತಾ.ಪಂ ಇಒಗೆ ಸಾರ್ವಜನಿಕ ಅರ್ಜಿ ನೀಡಿದರು.

ಕೂಡಗಿ ಗ್ರಾ.ಪಂ ಪಿಡಿಒ ಎ.ಎಸ್. ಕೊಟ್ಯಾಳ ಕೊರೋನಾ ಸಂದಿಗ್ಧತೆ ವೇಳೆ ಸಾರ್ವಜನಿಕರ ಸಂಕಷ್ಟ ನೋವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪದ ಮಳೆಗರೆದಿದ್ದಾರೆ.

ಕೂಡಗಿ ತಾಂಡಾದ ಗ್ರಂಥಾಲಯ ಅಭಿವೃದ್ಧಿ, ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದೆ ನಿರ್ಲಕ್ಷ ತೋರಿದ್ದಾರೆ. ಜನಪ್ರತಿಗಳ ಹಾಗೂ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದ ಕಾರಣ ಪಿಡಿಒ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ ಎಂದು ಕೂಡಗಿ ತಾಂಡಾ ಮುಖಂಡ ಅರುಣ್ ನಾಯಕ್ ಮಾಹಿತಿ ನೀಡಿದರು.

Related