ಬಿಜೆಪಿ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

ಬಿಜೆಪಿ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

ಬೆಂಗಳೂರು : ಸರ್ಕಾರ ರಚನೆಯಾದರೂ ಇಂದು ಕಷ್ಟಕಾಲದಲ್ಲಿ ನನ್ನ ಜೊತೆ ಯಾರೂ ನಿಲ್ಲುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಗ್ಗೆ ಅಸಮಾಧಾನವಿಲ್ಲ. ನಾನು ಹೋರಾಟದಿಂದ ಬಂದವನು. ಎಲ್ಲವನ್ನು ಎದುರಿಸಿ ನಿಲ್ಲುತ್ತೇನೆ. ನನ್ನ ವಿರುದ್ಧ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಹೇಳಿದರು.

ಸಾ.ರಾ. ಮಹೇಶ್ ಬಗ್ಗೆ ನಾನು ಮಾತನಾಡುವುದಿಲ್ಲ. ಸಾ.ರಾ ಮಹೇಶ್ ಕೊಚ್ಚೆ. ಕೊಚ್ಚೆಗೆ ಪದೇ ಪದೇ ಕಲ್ಲೆಸೆದು ನನ್ನ ಬಿಳಿ ವಸ್ತ್ರವನ್ನ ಕೊಳೆ ಮಾಡಿಕೊಳ್ಳೋದಿಲ್ಲ. ಆತ ಯಾರೋ ಬಾಯಿಗೆ ಬಂದAತೆ ಮಾತನಾಡಿದರೆ ನಾನು ಪ್ರತಿಕ್ರಿಯಿಸಬೇಕಿಲ್ಲ ಎಂದು ತಿರುಗೇಟು ನೀಡಿದರು.

Related