ಹಳ್ಳಿ ಗೌರಿರಾಜ್ ನಿಧನಕ್ಕೆ ಕಂಬನಿ

ಹಳ್ಳಿ ಗೌರಿರಾಜ್ ನಿಧನಕ್ಕೆ ಕಂಬನಿ

ಕೊಟ್ಟೂರು: ಕೊಟ್ಟೂರಿನ ವಿ.ವಿ.ಸಂಘದ ಕೊಟ್ಟೂರೇಶ್ವರ ಮಹಾವಿದ್ಯಾಲಯಕ್ಕೆ ಸಭಾ ಭವನ, ಭೌತಶಾಸ್ತ್ರ ಪ್ರಯೋಗಾಲಯ ಮತ್ತು ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮತ್ತು ಕಾಲೇಜಿನ ಬೆಳವಣಿಗೆಗೆ ಆರ್ಥಿಕ ನೆರವು ನೀಡಿದ ಪಟ್ಟಣದ ಶ್ರೀ ಮತಿ ಹಳ್ಳಿ ಗೌರಿರಾಜ್ ಗುರುವಾರ ಅಮೇರಿಕಾದ ಡೆಲಾಸ್ ನಗರದಲ್ಲಿ ನಿಧನಹೊಂದಿದ್ದಾರೆ.

ಅವರ ಆತ್ಮಕ್ಕೆ ದೇವರು ಚಿರ ಶಾಂತಿ ಕರುಣಿಸಲೆಂದು ಪ್ರಾರ್ಥಿಸಿ ಶುಕ್ರವಾರ ಕೊಟ್ಟೂರೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಅದ್ಯಕ್ಷ ಸಿದ್ದರಾಮ ಕಲ್ಮಠ ಮತ್ತು ಸದಸ್ಯರು ಹಾಗೂ ಪದವಿ ಕಾಲೇಜ್ ಪ್ರಾಚಾರ್ಯ ಡಾ.ಡಿ.ರವೀಂದ್ರ ಗೌಡ, ಪ.ಪೂ ಕಾಲೇಜ್ ಪ್ರಾಚಾರ್ಯ ಪೋ. ಪ್ರಶಾಂತ ,ಉಪನ್ಯಾಸಕರು ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಕಂಬನಿ ಮಿಡಿಯುವ ಮೂಲಕ ಸಂತಾಪ ಸೂಚಿಸಿದರು.

ವಿ.ವಿ.ಸಂಘದ ಅದ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾದ್ಯಕ್ಷ ರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಬಿ.ವಿ.ಬಸವರಾಜ್, ಸಹಕಾರ್ಯದರ್ಶಿ ದರೂರು ಶಾಂತನಗೌಡ, ಖಜಾಂಚಿ ಗೋನಾಳ್ ರಾಜಶೇಖರಗೌಡ, ಸಂತಾಪ ಸಲ್ಲಿಸಿದ್ದಾರೆ.

Related