ಯತ್ನಾಳ್ ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ವಿಜಯೇಂದ್ರ?

ಯತ್ನಾಳ್ ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ವಿಜಯೇಂದ್ರ?

ಬೆಂಗಳೂರು: ರಾಜ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ವಪಕ್ಷ ನಾಯಕರುಗಳಲ್ಲಿ ಅಸಮಾಧಾನದ ಕಿಚ್ಚು ಮುಗಿಲೆದ್ದಿದೆ.

ನೂತನವಾಗಿ ಆಯ್ಕೆಗೊಂಡಿರುವ ಬಿಜೆಪಿಯ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಬಿ ವೈ ವಿಜಯೇಂದ್ರ ಅವರಿಗೆ ಪಕ್ಷ ನಿಭಾಯಿಸಲು ಆಗುತ್ತಿಲ್ಲವೆಂದು ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಅವರು ಈಗಾಗಲೇ ಆರೋಪಗಳನ್ನು ಮಾಡುತ್ತಿದ್ದಾರೆ.

ಇನ್ನು ಯತ್ನಾಳ್ ಅವರ ಆರೋಪದ ಬಿನ್ನಲೇ ಬಸವರಾಜ್ ಯತ್ನಾಳ್ ಅವರ ತವರು ಜಿಲ್ಲೆಯಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಮಾವೇಶ ಆಯೋಜಿಸಿದ್ದಾರೆ.

ಹೌದು ಬಿಜೆಪಿ ಪಕ್ಷದಲ್ಲಿ ಈಗಾಗಲೇ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹರ ಸಾಹಸ ಪಡುತ್ತಿದ್ದು ಇಂದು ವಿಜಯನಗರದಲ್ಲಿ ಬಿಜೆಪಿಯ ಸಮಾವೇಶ ಸಭೆಯನ್ನು ಹಮ್ಮಿಕೊಂಡಿದ್ದಾರೆ.

ವಿಜಯೇಂದ್ರ ಪಾಲಿಗೆ ಮಗ್ಗುಲಮುಳ್ಳು ಅಂದ್ರೆ ಅದು ಬಸನಗೌಡ ಪಾಟೀಲ ಯತ್ನಾಳ್​. ಯತ್ನಾಳ್ ಶಕ್ತಿ ಕುಗ್ಗಿಸಲು ವಿಜಯೇಂದ್ರ ಮತ್ತು ಯಡಿಯೂರಪ್ಪ ರಣತಂತ್ರ ರೆಡಿಮಾಡಿದ್ದಾರಂತೆ. ಯತ್ನಾಳ್ ಜಿಲ್ಲೆಯಲ್ಲೇ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸ್ತಿದ್ದು ಯತ್ನಾಳ್ ವಿರೋಧಿ ಎ.ಎಸ್ ಪಾಟೀಲ್ ನಡಹಳ್ಳಿಗೆ ಹೊಣೆವಹಿಸಲಾಗಿದೆ. ಇದಕ್ಕೂ ಮುನ್ನ ಡಿಸೆಂಬರ್​ 31ರಂದು ಬಾಗಲಕೋಟೆಯಲ್ಲೂ ಯತ್ನಾಳ್​ ವಿರೋಧಿ ನಿರಾಣಿ ನೇತೃತ್ವದಲ್ಲಿ ಕಾರ್ಯಕ್ರಮವನ್ನೂ ಬಿಜೆಪಿ ಹಮ್ಮಿಕೊಂಡಿದೆ.

 

 

 

Related