ವರುಣ ಆರ್ಭಟಕ್ಕೆ : ಬದುಕು ಮೂರಾಬಟ್ಟೆ!

ವರುಣ ಆರ್ಭಟಕ್ಕೆ : ಬದುಕು ಮೂರಾಬಟ್ಟೆ!

ಕಲಬುರಗಿ : ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಮತ್ತೆ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಹಲವೆಡೆ ಮನೆಗಳು ಕುಸಿದಿದ್ದು, ಕೆಲವೆಡೆ ಜಲಾವೃತಗೊಂಡು ನಿವಾಸಿಗಳು ಪರದಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಶಾಂತನಾಗಿದ್ದ ವರುಣದೇವ ರಾತ್ರಿಇಡೀ ಅಬ್ಬರಿಸಿದ್ದಾನೆ. ಪರಿಣಾಮ ಕಲಬುರಗಿ -ಸೇಡಂ ಮತ್ತು ಚಿಂಚೋಳಿ- ಬೀದರ್ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕಲಬುರಗಿ ನಗರದ ಕೆಳಪ್ರದೇಶದ ಬಡಾವಣೆಯ ಮನೆಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಳೆನೀರು ಹರಿಯುತ್ತಿದ್ದ ರಭಸಕ್ಕೆ ಚಿಂಚೋಳಿ ತಾಲೂಕಿನಲ್ಲಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಕೇರಳ್ಳಿ ಗ್ರಾಮದ 15ಕ್ಕೂ ಅಧಿಕ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Related