ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಲಸಿಕೆ

ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಲಸಿಕೆ

ಕೊಟ್ಟೂರು : ವಿಜಯನಗರದಲ್ಲಿ ಎಲ್ಲರೂ ಲಸಿಕೆಯನ್ನು ಪಡೆದು ಕೊರೋನಾ ಮುಕ್ತ ಮಾಡೋಣ ಎಂದು ಎಪಿಎಂಸಿ ಕಾರ್ಯದರ್ಶಿ ವೀರಣ್ಣ ಹೇಳಿದರು. ಆರೋಗ್ಯ ಕೇಂದ್ರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಹಯೋಗದಲ್ಲಿ ಮಂಗಳವಾರ ಕೊವೀಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಉಚಿತವಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉಚಿತವಾಗಿ ನೀಡುತ್ತದೆ. ಎಲ್ಲರೂ ಸದಪಯೋಗಪಡೆದುಕೊಳ್ಳಬೇಕೆಂದರು.

ವೈದ್ಯರ ಸಲಹೆಯಂತೆ ಲಸಿಕೆಯನ್ನು ಹಾಕಿಕೊಳ್ಳಬೇಕು. ಕೊರೋನಾ ಮೂರನೇ ಅಲೆ ನಮ್ಮ ತಾಲೂಕಿನಲ್ಲಿ ಬರದಿರಲಿ ಎಂದು ಶ್ರೀ ಗುರು ಬಸವೇಶ್ವರ ಸ್ವಾಮಿಯಲ್ಲಿ ಬಿನ್ನಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಆರೋಗ್ಯ ಕೇಂದ್ರ ಮಧು ಮಹಂತೇಶ್ .ಕೊಟ್ರಮ್ಮ ಇತರರು ಸಿಬ್ಬಂದಿ ವರ್ಗದವರು ಇದ್ದರು.

Related