ಸಮಯ ಬದಲಾಯಿಸಿದ ಕೆಎಸ್‌ಆರ್‌ಟಿಸಿ ಬಸ್ಸು

ಸಮಯ ಬದಲಾಯಿಸಿದ ಕೆಎಸ್‌ಆರ್‌ಟಿಸಿ ಬಸ್ಸು

ಶಿರಾ : ಬಸ್ಸಿನ ಸಮಯ ಬದಲಾವಣೆ ಮಾಡುವಂತೆ ಒತ್ತಾಯಿಸಿ ಸಾರಿಗೆ ಬಸ್ಸು ತಡೆದು ರಸ್ತೆಗೆ ಮರದ ಡಿಮ್ಮಿ ಹಾಗೂ ಕಳ್ಳೆ ಹಾಕಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಪ್ರತಿಭಟನೆ ಮಾಡಿದ ಘಟನೆ ಶಿರಾ ತಾಲೂಕಿನ ಹೂಸೂರು ಗ್ರಾಮದಲ್ಲಿ  ನಡೆದಿದೆ.

ಕೊರೊನಾ ಶಿಕ್ಷಣದ ಮಕ್ಕಳ ಶಿಕ್ಷಣದ ಮೇಲೆ ಬರೆ ಹಾಕಿದರೆ, ಕೆಎಸ್‌ಆರ್‌ಟಿಸಿ ನಿರ್ಲಕ್ಷ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿರಾ ತಾಲೂಕಿನ ಪುರ್ಲಹಳ್ಳಿ, ಗೋಮಾರದನಹಳ್ಳಿ, ಭೂತಪ್ಪನ ಗುಡಿ, ರಂಗನಹಳ್ಳಿ ಗ್ರಾಮಗಳ ನೂರಾರು ವಿಧ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೂಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬರಬೇಕು. ಈ ಶಾಲೆ ಆಂಗ್ಲ ಮಾಧ್ಯಮದ ಜೊತೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣ ಹೆಚ್ಚು ವಿಧ್ಯಾರ್ಥಿಗಳು ಈ ಶಾಲೆಗೆ ದಾಖಲಾಗುತ್ತಾರೆ. ಬೆಳಿಗ್ಗೆ 9.30 ಗಂಟೆಗೆ ತಾವರೆಕೆರೆ ಮಾರ್ಗವಾಗಿ ಹೂಸೂರು ಗ್ರಾಮಕ್ಕೆ ಬರುತ್ತಿದ್ದ ಬಸ್ಸು ಎಕಾಏಕಿ ಸಮಯ ಬದಲಾವಣೆ ಮಾಡಿ 11.ಗಂಟೆಗೆ ಬರುತ್ತಿರುವುದು ವಿಧ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಶಿರಾ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದರು ಪ್ರಯೋಜನವಾಗದ ಕಾರಣ ಇಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಿರಾ ಕೆಎಸ್‌ಆರ್‌ಟಿಸಿ ಘಟಕ ಡಿಪೋ ವ್ಯವಸ್ಥಾಪಕ ವಿನೋದ್ ಪ್ರತಿಭಟನಾ ನಿರತರ ಮನವೊಲಿಸಿ ವಿದ್ಯಾರ್ಥಿಗಳು ಕೇಳಿರುವ ಸಮಯಕ್ಕೆ ಬಸ್ಸು ಸಂಚಾರಕ್ಕೆ ಅನುವು ಮಾಡಿ ಕೊಡುವ ಭರವಸೆಯ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಪುಟ್ಟಜುಂಜಯ್ಯ, ಮುಖಂಡ ಗೋಮಾರದಹಳ್ಳಿ ಮಂಜುನಾಥ್, ಹೆಚ್.ಜೆ.ನರಸಿಂಹಮುರ್ತಿ, ನಾಗರಾಜು, ಈಶ್ವರ್, ಪುಟ್ಟಜುಂಜಯ್ಯ, ಐಸುಗೌಡ, ಹೆಚ್.ಜೆ.ನಟರಾಜು, ಸಂಕಾಪುರ ಚಿದಾನಂದ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

 

Related