ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿ

ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿ

ಗಂಗಾವತಿ : ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಮೂವರು ಸಹೋದರರು ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಪಂಪಾನಗರ ಪಾಂಡುರಂಗ ದೇವಸ್ಥಾನ ಸಮೀಪ ಸಂಭವಿಸಿದೆ.

ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕರಾಗಿದ್ದ ದತ್ತಾತ್ರೇಯ ಪತ್ತಾರ (ದತ್ತಣ್ಣ) ಅವರಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡು ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಕೇವಲ ಆರು ದಿನಗಳ ಹಿಂದಷ್ಟೆ ಕೊಪ್ಪಳದಲ್ಲಿ ಸಾವನ್ನಪ್ಪಿದ್ದರು.

ಅದಾದ ಬಳಿಕ ದತ್ತಣ್ಣ ಅವರ ಇಬ್ಬರು ಸಹೋದರರಾದ ಪ್ರಕಾಶ್ ಪತ್ತಾರ ಮತ್ತು ರವಿಶಂಕರ್ ಒತ್ತಾರ ಅವರಿಗೂ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಪೈಕಿ ಪ್ರಕಾಶ್ ಪತ್ತಾರ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.

Related