ನನ್ನ ಹೆಸರಲ್ಲೇ ಲಕ್ಷ್ಮಣನಿದ್ದಾನೆ: ಸವದಿ

ನನ್ನ ಹೆಸರಲ್ಲೇ ಲಕ್ಷ್ಮಣನಿದ್ದಾನೆ: ಸವದಿ

ಕಲಬುರಗಿ: ನನ್ನ ಹೆಸರಲ್ಲೇ ಲಕ್ಷ್ಮಣನಿದ್ದಾನೆ ಹಾಗಾಗಿ ನಾನು ಎಂದಿಗೂ ಕೂಡ ರಾಮನನ್ನು ವಿರೋಧಿಸುವುದಿಲ್ಲ. ರಾಮ ಮತ್ತು ಲಕ್ಷ್ಮಣರು ಎಂದಿಗೂ ದೂರವಾಗುವುದಿಲ್ಲ ಹಾಗಾಗಿ ನಾನು ಕೂಡ ರಾಮಭಕ್ತನೆ. ಒಂದಲ್ಲ ಒಂದು ದಿನ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನವನ್ನು ಪಡೆಯುತ್ತೇನೆ ಎಂದು ಕಾಂಗ್ರೆಸ್ನ ಶಾಸಕ ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಾಮನ ಪರಮ ಭಕ್ತ, ಅದಕ್ಕೂ ಮಿಗಿಲಾಗಿ ನನ್ನ ಹೆಸರಲ್ಲೇ ಲಕ್ಷ್ಮಣ ಅಂತಿರೋವಾಗ ರಾಮನಿದ್ದಲ್ಲಿಗೆ ಹೋಗದೆ ಇರಲಾಗುತ್ತದೆಯೆ? ರಾಮನ ಭಕ್ತ ನಾನು, ಅವನ ಸಹೋದರನ ಹೆಸರಿದೆ ನನಗೆ, ನಾನು ಈಗಲ್ಲದಿದ್ದರೂ ಮುಂದೆ ಒಂದು ದಿನ ರಾಮ ಮಂದಿರಕ್ಕೆ ಹೋಗಿ ಬರುತ್ತೇನೆಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ರಾಮನಿಂದ ಲಕ್ಷ್ಮಣ ಎಂದಿಗೂ ದೂರವಾಗೋದಿಲ್ಲ, ರಾಮನ ಭಕ್ತಿ ದೂರ-ಸಮೀಪ ಅಂತೇನಿರೋದಿಲ್ಲ, ಹೃದಯದಲ್ಲೇ ರಾಮನಿದ್ದಾನೆಂದು ಪುನರುಚ್ಚರಿಸಿದರು. ಹೆಚ್ಚಿನ ಸ್ಥಾನ ಲೋಕಸಭೆಯಲ್ಲಿ ಗೆಲ್ಲಿಸಿಕೊಡಿ, ಸಿದ್ದರಾಮಯ್ಯನವರೇ ಮುಂದಿನ 5 ವರ್ಷ ಸಿಎಂ ಆಗಲಿದ್ದಾರೆಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸವದಿಯವರು, ಯತೀಂದ್ರ ಹೇಳಿಕೆ ವೈಯಕ್ತಿಕ, ಇಂತಹದ್ದನ್ನೆಲ್ಲ ನೋಡಿಕೊಳ್ಳಲು ಹೈಕಮಾಂಡ್‌ ಇದೆ ಎಂದರು.

 

Related