ವೈದ್ಯ ಲೋಕ ಸಾಕಷ್ಟು ಮುಂದುವರಿದಿದೆ

ವೈದ್ಯ ಲೋಕ ಸಾಕಷ್ಟು ಮುಂದುವರಿದಿದೆ

ಮಹದೇವಪುರ : ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ, ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆ ಪೂರೈಸಬಹುದು ಎಂದು ಪ್ರಶಾಂತ್ ಫೌಂಡೇಶನ್ ಮುಖ್ಯಸ್ಥ ಪ್ರಶಾಂತ್ ರೆಡ್ಡಿ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕಾಡುಗುಡಿಯಲ್ಲಿ ಪ್ರಶಾಂತ್ ಫೌಂಡೇಶನ್ ನೇತೃತ್ವದಲ್ಲಿ ಹಾಗೂ ಸುಶ್ರುತ ಸ್ವಯಂ ಸೇವಾ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರಕ್ಕೆ ಕ್ಷೇತ್ರದ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಟರಾಜ್, ಪ್ರ.ಫೌ ಮುಖ್ಯಸ್ಥ ವೀರಾಸ್ವಾಮಿರೆಡ್ಡಿ ಚಾಲನೆ ನೀಡಿ ಮಾತನಾಡಿ, ಪ್ರಶಾಂತ್, ಕೋವಿಡ್-೧೯ ಮಹಾಮಾರಿಯ ಭೀತಿಯಿಂದಾಗಿ ರಕ್ತ ಸಂಗ್ರಹಣ ಕೇಂದ್ರಗಳಲ್ಲಿ ರಕ್ತದ ಬೇಸರ ವ್ಯಕ್ತಪಡಿಸಿದರು. ರಕ್ತದಾನದಿಂದ ಪ್ರಾಣ ಉಳಿಸುವುದಲ್ಲದೆ ಆರೋಗ್ಯದಲ್ಲೂ ಸಹ ಬೇಡವಾದಂಹ ಕೊಬ್ಬಿನ ಅಂಶ ತೆಗೆದು ಹಾಕಲು ಸಹಾಯಕಾರಿ ಎಂದರು.

Related