ಹಾವೇರಿ ಭಾನುವಾರ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಂಗಿ ಗ್ರಾಮಸ್ಥರು ಆಯೋಜಿಸಿದ ವೀರರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಈಗಾಗಲೇ ರಾಜ್ಯದ ಮಹಿಳೆಯರು ಇದರ ಫಲವನ್ನು ಬಳಸಿಕೊಳ್ಳುತ್ತಿದ್ದಾರೆ ಎಮದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹೇಳಿದುರು.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗ್ಯಾರಂಟಿ ಘೋಷಣೆಗಳ ಬಗ್ಗೆ ಮಾತನಾಡುತ್ತಿದ್ದರು ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಮಧ್ಯೆ ಪ್ರವೇಶಿಸಿದ ವ್ಯಕ್ತಿ ಕಿರಿಕ್ ಮಾಡಿದ. ಆತ ಮದ್ಯ ಸೇವಿಸಿರೋ ವಿಷಯ ತಿಳಿದು ಸಚಿವರು ಸಹ ಆತನ ಮಾತುಗಳನ್ನು ಕೇಳಿ ನಕ್ಕರು.
ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ತಂದಿರೋದು ಮಹಿಳೆಯರಿಗಾಗಿ ಅಲ್ಲ. ಪುರುಷರ ಜೇಬಿನಲ್ಲಿ ಹಣ ಉಳಿಯಬೇಕೆಂದು ಈ ಯೋಜನೆಗಳನ್ನ ತರಲಾಗಿದೆ ಎಂದರು.
ಪುರುಷರ ಜೇಬು ಖಾಲಿಯಾಗದಿರಲಿ ಎಂಬ ಉದ್ದೇಶಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು. ಇಷ್ಟು ಹೇಳುತ್ತಿದ್ದಂತೆ ಎದ್ದು ನಿಂತ ಕುಡುಕ, ನಿಮಗೂ ಒಂದು ಸ್ಕೀಂ ಮಾಡುವ ಚಿಂತನೆ ಇದೆ ಎಂದು ಹೇಳಿದ.
ಮದ್ಯ ಸೇವಿಸಿದ ವ್ಯಕ್ತಿಯ ಮಾತು ಕೇಳುತ್ತಿದ್ದಂತೆ ನೆರೆದಿದ್ದ ಜನರು ನಗೆಗಡಲಿನಲ್ಲಿ ತೇಲಾಡಿದರು. ಸಚಿವರು ಸಹ ಆತನ ಮಾತುಗಳನ್ನು ಕೇಳಿ ನಕ್ಕು, ತಮ್ಮ ಮಾತುಗಳನ್ನು ಮುಂದುವರಿಸಿದರು.