ತಹಶೀಲ್ದಾರ್ ರಶ್ಮಿರಿಂದ ಕೆರೆ ತೆರವು

ತಹಶೀಲ್ದಾರ್ ರಶ್ಮಿರಿಂದ ಕೆರೆ ತೆರವು

ಸಂಡೂರು- ಸೋವೆನಹಳ್ಳಿ  ಗ್ರಾಮದ ಒತ್ತುವರಿ   ಕೆರೆಗಳನ್ನು ತಹಶೀಲ್ದಾರ್ ರಶ್ಮಿ ಮಂಗಳವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ತೆರವುಗೊಳಿಸಿದರು.
ಈ ವೇಳೆ ಮಾತನಾಡಿದ ಅವರು ಸರ್ವೇ ನಂ. 47ರ 295 ಎಕರೆ ವಿಸ್ತೀರ್ಣದ ಕೆರೆಯನ್ನು ಕೆಲ ರೈತರು ಒತ್ತುವರಿ ಮಾಡಿದ್ದು, ಅದರಲ್ಲಿ ಕೆಲವರು ತೆರವಿಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿದ್ದಾರೆ. ಕೊಟ್ರಮ್ಮ, ರೈತ ಹೊಳಿಯಪ್ಪ ತೆರವಿಗೆ ಅಡ್ಡಿ ಪಡಿಸಿದ್ದರಿಂದ ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ಈ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಇದರ ವಿರುದ್ಧವೂ ನಡೆದುಕೊಂಡರೆ ಕಾನೂನು ಕ್ರಮಗಳ ಮೂಲಕ ತೆರವುಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಂಬಂಧಪಟ್ಟಅಧಿಕಾರಿಗಳಾದ ಪಿ.ಎಂ. ರಾಮಾಂಜಿನೇಯಲು, ಕಂದಾಯ ನಿರೀಕ್ಷಕರಾದ ಯರ್ರಿಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

Related