ಪೊಲೀಸ್​ ಮೊರೆ ಹೋದ ಮಾಜಿ ಸಚಿವ

ಪೊಲೀಸ್​ ಮೊರೆ ಹೋದ ಮಾಜಿ ಸಚಿವ

ಶಿವಮೊಗ್ಗ: ನನಗೆ ಕಳೆದ ರಾತ್ರಿ‌ 12:30ಕ್ಕೆ ಮಿಸ್ಡ್​ ಕಾಲ್ ಬಂದಿತ್ತು. ಕಜಾಕಿಸ್ತಾನದ +7(678)815-46-5 ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಾರ ರಾತ್ರಿ 12:30 ಗಂಟೆಗೆ ಕಜಾಕಿಸ್ತಾನ ದೇಶದಿಂದ ನನಗೆ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ನಾನು ಎಸ್​ಪಿಗೆ ದೂರು ನೀಡುತ್ತೇನೆ ಎಂದರು.

ರಾಜ್ಯದಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಳವಾಗುತ್ತಿವೆ. ಬೆಳಗಾವಿಯಲ್ಲಿ ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ ಕೂಗಲಾಗಿದೆ. ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಐವರ ವಿರುದ್ಧ ಕೇಸ್​ ದಾಖಲಾಗಿದೆ.ಡಿಕೆಶಿ, ಸಿದ್ದರಾಮಯ್ಯ ಜಾತಿ ಮೂಲಕ ಸಿಎಂ ಸ್ಥಾನ ಕೇಳ್ತಿದ್ದಾರೆ. ಈ ಮೂಲಕ ಇವರು ಜಾತಿವಾದಿ ಎನ್ನುವುದು ಸಾಬೀತು ಆಗಿದೆ. ಜೆಡಿಎಸ್ ಎಂಎಲ್​ಸಿ ಭೋಜೇಗೌಡ ವ್ಯಭಿಚಾರ ಮಾಡಿದ್ದಾರೆ. ಕಾಂಗ್ರೆಸ್​​ನವರು ಭೋಜೇಗೌಡಗೆ ಕ್ಷೀರಾಭಿಷೇಕ ಮಾಡಿದ್ದಾರೆ

 

Related