ಸಾವಿನ ಮನೆಯ ಕದ ತಟ್ಟಿದ ಕುಟುಂಬ!

ಸಾವಿನ ಮನೆಯ ಕದ ತಟ್ಟಿದ ಕುಟುಂಬ!

ದಾವಣಗೆರೆ : ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ತಾಯಿ-ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ರಾಜಪ್ಪ ಪತ್ನಿ ಕಮಲಮ್ಮ ಮತ್ತು ಇವರ ಮಗಳು ಶ್ರುತಿ(24), ಮಗ ಸಂಜಯ್(21) ಮೃತ ದುರ್ದೈವಿಗಳು.

ಈ ಮೂವರೂ ಸಂತೆಬೆನ್ನೂರು ವ್ಯಾಪ್ತಿಯ ಸೂಳೆಕೆರೆ ಕ್ಯಾನಲ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಶ್ರುತಿ ಮತ್ತು ಸಂಜಯ್ ಮೃತದೇಹ ಪತ್ತೆಯಾಗಿದ್ದು, ಶುಕ್ರವಾರ ಮಧ್ಯಾಹ್ನಯಾದರೂ ತಾಯಿ ಶವ ಪತ್ತೆಯಾಗಿರಲಿಲ್ಲ. ಶೋಧಕಾರ್ಯ ಮುಂದುವರಿದಿತ್ತು.

ಶ್ರುತಿ ಮದುವೆ ವಿಚಾರಕ್ಕೆ ಕುಟುಂಬದ ಸದಸ್ಯರ ಮಧ್ಯೆ ಮನಸ್ತಾಪ ಇತ್ತು. ಇದೇ ವಿಚಾರಕ್ಕೆ ನೊಂದು ಮೂವರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related