ರಾಜ್ಯಾಧ್ಯಕ್ಷರ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿದೆ! ಕೆಪಿಸಿಸಿ ಟಾಂಗ್

ರಾಜ್ಯಾಧ್ಯಕ್ಷರ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿದೆ! ಕೆಪಿಸಿಸಿ ಟಾಂಗ್

ಬೆಂಗಳೂರು : ಚುನಾವಣೆ ವೇಳೆ ಪಕ್ಷಗಳು ಕೆಸರೆರಾಚುಡುವುದು ಸಾಮಾನ್ಯ.  ಉಪ ಚುನಾವಣೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ, ಚುನಾವಣಾ ಪ್ರಚಾರ ಮುಗಿದ ನಂತರವೂ ಮುಂದುವರಿದಿದೆ.

ಬಿಜೆಪಿ ಮತ್ತು ಜೆಡಿಎಸ್ ಉಪ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ” ಕಾಂಗ್ರೆಸ್‌ನವರು ಮಾಡುವ ರಾಜಕೀಯ, ಒಳ ಒಪ್ಪಂಡ, ಎಷ್ಟಾದರೂ ತಲೆ ಹಿಡುಕ ಪಕ್ಷ ಎಂದು ಕಟೀಲ್‌ರವರು ತಿರುಗೇಟು ನೀಡಿದ್ದರು.

ಇದಕ್ಕೆ ಕೆಪಿಸಿಸಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು ಹೀಗೆ, “ಕಾಮಿಡಿ ಕಿಂಗ್ ನಳಿನ್ ಕಟೀಲ್ ಅವರ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿ ಹೋಗಿದೆ. ತಲೆಹಿಡುಕ ಯಾರೆಂದು ಕೇಳಿದರೆ ಮಂಗಳೂರು ಭಾಗದ ಜನತೆ ಬಗೆಬಗೆಯಾಗಿ ಕಟೀಲ್‌ರ ರಾಸಲೀಲೆ ವಿವರಿಸುತ್ತಾರೆ” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

“ಕಟೀಲ್‌ರೇ ನೀವು ತಲೆಹಿಡಿದ ಪಟ್ಟಿ ದೊಡ್ಡದಿದೆ ಅಲ್ಲವೇ? ನಿಶಿತಾ ಪೂಜಾರಿಯಿಂದ ಹಿಡಿದು ಕರಾವಳಿಯ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ ಹೇಳುವಿರಾ?” ಎಂದು ಕೆಪಿಸಿಸಿ, ನಳಿನ್ ಕಟೀಲ್ ಅವರನ್ನು ಪ್ರಶ್ನಿಸಿದೆ. “ಬಿಜೆಪಿ ಪಕ್ಷ ತಲೆಹಿಡುಕರ ಅಡ್ಡೆಯಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆವು, ಆ ಸಾಧನೆಯಲ್ಲಿ ಕಟೀಲ್ ಅವರ ಕೊಡುಗೆ ದೊಡ್ಡದಿದೆ.

ಕರಾವಳಿ ಭಾಗದ ಜನ ಇವರ ಲೀಲೆಗಳ ಬಣ್ಣನೆ, ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ನಳಿನ್ ಕಟೀಲ್ ಅವರೇ ಬಹಳ ಹಿಂದೆ ನಿಮ್ಮದೂ ಒಂದು ಸಿ.ಡಿ ಸದ್ದು ಮಾಡಿತ್ತಲ್ಲ, ಏನದು ನೀವು ಹೇಳುವಿರಾ, ನಾವೇ ಹೇಳಬೇಕೆ?!”ಎಂದು ಕೆಪಿಸಿಸಿ ಟ್ವೀಟ್ ಮೂಲಕ ನಳಿನ್ ಕಟೀಲ್ ಗೆ ತಿರುಗೇಟು ನೀಡಿದೆ.

Related