ಮಹಾ ಉದ್ದವ್ ಠಾಕ್ರೆ ಹೇಳಿಕೆ ವಿರೋಧಿಸಿ ಪ್ರತಿಭಟನೆ

ಮಹಾ ಉದ್ದವ್ ಠಾಕ್ರೆ ಹೇಳಿಕೆ ವಿರೋಧಿಸಿ ಪ್ರತಿಭಟನೆ

ಕೆ.ಆರ್.ಪುರಂ : ಕೆ.ಆರ್.ಪುರದ ಬಿಬಿಎಂಪಿ ಕಚೇರಿ ಎದುರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿಕೆ ವಿರೋಧಿಸಿ, ಕರ್ನಾಟಕ ರಕ್ಷಣಾ ಜನಸೇನೆ ರಾಜ್ಯಾಧ್ಯಕ್ಷ ಆರ್.ಪಿ ಗೋಪಾಲಗೌಡ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಮರಾಠಿ ಭಾಷೆ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ  ಸೇರಿಸುವ  ಉದ್ದಟತನ  ಹೇಳಿಕೆ  ನೀಡಿದ್ದ  ಉದ್ದವ್  ಠಾಕ್ರೆ, ಒಕ್ಕೂಟ ವ್ಯವಸ್ಥೆಗೆ ಪ್ರತಿಭಾರಿ ಭಂಗ ತರುತ್ತಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಾಗೂ ಎಂಇಎಸ್  ಪುಂಡರು, ಗಡಿಯಲ್ಲಿ ನಡೆಯುತ್ತಿರುವ ಪುಂಡಾಟಿಕೆಗಳನ್ನು ಸರ್ಕಾರ ತಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕೆ.ಆರ್.ಪುರಂ ಅಧ್ಯಕ್ಷ ನಾಗರಾಜ್ ಗೌಡ, ಕಾರ್ಯ ಅಧ್ಯಕ್ಷ ಮುರಳಿ, ಸುಜಾತ, ತಾಯಪ್ಪ, ವರಲಕ್ಷ್ಮಿ, ಪ್ರಸನ್ನ ಕುಮಾರ್, ರಾಜೇಶ್, ನಾಗೇಶ್, ಮಂಜು, ಮಧು ಇದ್ದರು.

Related