ತೆಲಂಗಾಣ; ನಾಳೆಯಿಂದಲೇ 2 ಯೋಜನೆ ಜಾರಿ!

ತೆಲಂಗಾಣ; ನಾಳೆಯಿಂದಲೇ 2 ಯೋಜನೆ ಜಾರಿ!

ಪಂಚ ರಾಜಕೀಯ ಚುನಾವಣೆಯಲ್ಲಿ ತೆಲಂಗಾಣವು ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು ಕಾಂಗ್ರೆಸ್ನ ನಾಯಕ ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಕೇವಲ ಎರಡು ದಿನಗಳಲ್ಲಿ ಚುನಾವಣೆಗೂ ಮುನ್ನ ಘೋಷಣೆ ಮಾಡಿರುವ ಆರು ಗ್ಯಾರೆಂಟಿಗಳನ್ನು ಜಾರಿ ಮಾಡಲು ಸಿದ್ಧವಾಗಿದ್ದಾರೆ

ತೆಲಂಗಾಣ ರಾಜ್ಯದಲ್ಲಿ 6 ಖಾತರಿಗಳ ಅನುಷ್ಠಾನದ ಅಂಗವಾಗಿ ಶನಿವಾರದಿಂದಲೇ ಎರಡು ಗ್ಯಾರಂಟಿಂಗಳನ್ನು ಜಾರಿಗೆ ತರಲು ಸಚಿವ ಸಂಪುಟ ನಿರ್ಧರಿಸಿದೆ. ಮೊದಲ ಖಾತರಿಯಡಿ ರಾಜ್ಯದಲ್ಲಿ ಮಹಿಳೆಯರಿಗೆ ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿಯಾಗಲಿದೆ.

ಎರಡನೇ ಗ್ಯಾರಂಟಿ ಯೋಜನೆ ಭಾಗವಾಗಿ 10 ಲಕ್ಷ ರೂ.ಗಳ ಆರೋಗ್ಯಶ್ರೀ ಉಚಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಜಾರಿಯಾಗಲಿದೆ.

ಮುಂದಿನ 100 ದಿನದೊಳಗೆ ಎಲ್ಲಾ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ರೇವಂತ್​ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಗುರುವಾರ ಸಿಎಂ ರೇವಂತ್ ರೆಡ್ಡಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಆ ಬಳಿಕ ಈ 2 ಯೋಜನೆಗಳನ್ನು ಘೋಷಿಸಲಾಗಿದೆ.

 

Related