ಆತ್ಮಹತ್ಯೆಗೆ ಶರಣಾದ ಬಾಳೆಹಣ್ಣು ವ್ಯಾಪಾರಿ

ಆತ್ಮಹತ್ಯೆಗೆ ಶರಣಾದ ಬಾಳೆಹಣ್ಣು ವ್ಯಾಪಾರಿ

ಬೆಂಗಳೂರು: ಕುಟುಂಬ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

ಮೃತ ವ್ಯಕ್ತಿ ಯಲಹಂಕದ ಎನ್‌ಇಎಸ್ ರಸ್ತೆಯಲ್ಲಿ ಬಾಳೆಹಣ್ಣು ಮಾರಿ ಜೀವನ ಸಾಗಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ರೈಲ್ವೆಹಳಿ ಬಳಿ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಯಲಹಂಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related