ಶ್ರೀಕಾಡ ಸಿದ್ಧೇಶ್ವರ ಮಠಕ್ಕೆ ಬಿಎಸ್‌ವೈ

ಶ್ರೀಕಾಡ ಸಿದ್ಧೇಶ್ವರ ಮಠಕ್ಕೆ ಬಿಎಸ್‌ವೈ

ತಿಪಟೂರು, ಫೆ. 20: ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಸೋಮೇಕಟ್ಟೆ ಶ್ರೀಕಾಡ ಸಿದ್ಧೇಶ್ವರ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಮಠದಲ್ಲಿ ನಡೆದ ಹೋಮದಲ್ಲಿ ಭಾಗವಹಿಸಿದರು. ಬಳಿಕ ಶ್ರೀಮಠದ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ನಡೆದ ಶ್ರೀಕರಿಬಸವ ಸ್ವಾಮಿಗಳ ೨೨೭ ನೇ ವಾರ್ಷಿಕ ಸ್ಮರಣೋತ್ಸವ, ಶ್ರೀ ಮಠದ ೧೯ನೇ ಗುರು ಕರಿಬಸವ ದೇಶಿಕೇಂದ್ರ ಸ್ವಾಮೀಜಿಗಳ ೧೨ನೇ ವರ್ಷದ ಪುಣ್ಯಾರಾಧನೆ ಮತ್ತು ಧರ್ಮ ಸಮಾರಂಭವನ್ನು ಉದ್ಘಾಟಿಸಿದರು.

ಕಾಡು ಸಿದ್ದೇಶ್ವರ ಮಠದ ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು, ಸುತ್ತೂರು ಮಠದ ಕಿರಿಯ ಶ್ರೀ ಜಯಚಾಮರಾಜೇಂದ್ರ ಸ್ವಾಮಿ, ಮಹಾರಾಷ್ಟçದ ಕರಜಗಿ ಮಠದ ಶಿವಾನಂದ ಸ್ವಾಮಿ, ಕಲಬುರಗಿಯ ಯಲಗೋಡು ಮಠದ ಗುರುಲಿಂಗ ಸ್ವಾಮಿ, ಹಾವೇರಿಯ ಗಂಚಿಗಟ್ಟಿ ಮಠದ ವೈಜನಾಥ ಶಿವಾಚಾರ್ಯ ಸ್ವಾಮಿ, ಶಾಸಕ ಬಿ.ಸಿ.ನಾಗೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರಿದ್ದರು.

Related