ಅಸ್ಸಾಂಗೆ ಸಹಾಯ ಮಾಡಿದ ಬೆಂಗ್ಳೂರಿನ ಶ್ರೀ ಹಟ್ಟಿ ಸಮ್ಮೇಳ..!

  • In Crime
  • July 16, 2022
  • 237 Views
ಅಸ್ಸಾಂಗೆ ಸಹಾಯ ಮಾಡಿದ ಬೆಂಗ್ಳೂರಿನ ಶ್ರೀ ಹಟ್ಟಿ ಸಮ್ಮೇಳ..!

ಅಸ್ಸಾಂನ ಸಿಲ್ಚಾರ್ ಪ್ರದೇಶವು ಪ್ರವಾಹದಿಂದಾಗಿ ಸಂಪೂರ್ಣವಾಗಿ ನೀರಿನಿಂದ ಮುಳುಗಿ ಹೋಗಿದೆ. ಜನರ ಎದೆಯ ಮಟ್ಟದಷ್ಟು ನೀರು ತುಂಬಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಶ್ರೀ ಹಟ್ಟ ಸಮ್ಮೇಳನ ಸೇರಿದಂತೆ ಅನೇಕ ಸಂಸ್ಥೆಗಳು ಸಿಲ್ಚಾರ್ ಪ್ರದೇಶದ ಜನರಿಗೆ ಸಹಾಯ ಮಾಡುತ್ತಿದೆ.

ಭೀಕರ ಪ್ರವಾಹದಿಂದಾಗಿ ಅಸ್ಸಾಂನ ಸಿಲ್ಚಾರ್ ಪ್ರದೇಶವು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜೂನ್ 19 2022ರ ರಾತ್ರಿ ಬರಾಕ್ ಮತ್ತು ಇತರೆ ಉಪನದಿಗಳಿಂದ ನೀರು ಹರಿದು ಬಂದಿರುವುದರಿಂದ ಸಿಲ್ಚಾರ್ ಪ್ರದೇಶದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡಿದೆ.

ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಜೂನ್ 20 ರ ಹೊತ್ತಿಗೆ ನಗರ ಸಂಪೂರ್ಣವಾಗಿ ನೀರಿನಿಂದ ಮುಳುಗಿದೆ. ಅಪಾಯದ ಮಟ್ಟಕ್ಕಿಂತ ನೀರು 1,78ಮೀ ಹರಿದು ಬಂದಿದ್ದು ಸಿಲ್ಚಾರ್ ಮತ್ತು ಅದರ ಅಕ್ಕ ಪಕ್ಕದ ಪ್ರದೇಶಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಸಿಲ್ಚಾರ್ ಪ್ರದೇಶದಲ್ಲಿ ನೆರೆಯ ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ರೈಲು, ರಸ್ತೆ ಮತ್ತು ವಾಯು ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯವಿಲ್ಲದೆ ಸಿಲ್ಚಾರ್ ನಿವಾಸಿಗಳು ಅಸಹಾಯಕರಾಗಿದ್ದಾರೆ.

Related